‘ನನಗೆ ಹಿಂದೂ ಆಗಿದಕ್ಕೆ ನಾಚಿಕೆಯಾಗುತ್ತದೆ !’(ಅಂತೆ) – ನಟಿ ಸ್ವರಾ ಭಾಸ್ಕರ್

ಗುರುಗ್ರಾಮ್ (ಹರಿಯಾಣ)ದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಣ ಮಾಡುವಾಗ ಗುಂಪೊಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಹಾಕಿದ ಪ್ರಕರಣ

  • ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂಗಳ ಮೇಲಾಗುತ್ತಿರುವ ದಾಳಿಗಳ ಬಗ್ಗೆ ಸ್ವರಾ ಭಾಸ್ಕರ್ ಚಕಾರವೆತ್ತಲಿಲ್ಲ. ಇದನ್ನು ನೋಡಿದ ಹಿಂದೂಗಳು, ‘ಸ್ವರಾ ಭಾಸ್ಕರ್ ಹಿಂದೂ ಆಗಿದ್ದಾಳೆ ಎಂದು ಹೇಳಲು ನಮಗೆ ನಾಚಿಕೆಯಾಗುತ್ತದೆ’ ಎಂದು ಹೇಳಿದರೆ ತಪ್ಪೇನು ? 
  • ಹಿಂದೂಗಳ ದೇವಾಲಯಗಳಲ್ಲಿ ಆರತಿ ನಡೆಯುತ್ತಿರುವಾಗ ಅದನ್ನು ನಿಲ್ಲಿಸುವಂತೆ ಒತ್ತಾಯಿಸುವ ಮತಾಂಧರ ವಿರುದ್ಧ ಸ್ವರಾ ಭಾಸ್ಕರ್‌ರವರ ‘ಸ್ವರ’ವೇಕೆ ಮುಚ್ಚುತ್ತದೆ ? 
  • ಸಾರ್ವಜನಿಕ ಸ್ಥಳಗಳಲ್ಲಿ ಅದೇ ರೀತಿ ಬೀದಿಗಳಲ್ಲಿ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡಿ ಸಮಾಜದಲ್ಲಿ ಅಡಚಣೆಯುಂಟು ಮಾಡುತ್ತಿರುವವರ ಬಗ್ಗೆ ಸ್ವರಾ ಭಾಸ್ಕರ್ ಇವರಂತಹವರು ಸ್ಮಶಾನ ಮೌನ ಏಕೆ ತಾಳುತ್ತಾರೆ ?

ನವ ದೆಹಲಿ – ಹರಿಯಾಣದ ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರಿಂದ ಶುಕ್ರವಾರ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡುತ್ತಿರುವಾಗ, ಗುಂಪೊಂದರಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲಾಯಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಈ ಬಗ್ಗೆ ಟ್ವೀಟ್ ಮಾಡುವಾಗ ನಟಿ ಸ್ವರಾ ಭಾಸ್ಕರ್ ಇವರು, ‘ನನಗೆ ಹಿಂದು ಆಗಿರುವುದಕ್ಕೆ ನಾಚಿಕೆಯಾಗುತ್ತಿದೆ’ ಎಂದು ಹೇಳಿದ್ದಾರೆ.(ಇಂತಹ ಹಿಂದೂದ್ವೇಷಿ ನಟಿಯ ಚಲನಚಿತ್ರದ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿ ಅವರಿಗೆ ಹಿಂದೂಗಳ ಸಂಘ ಶಕ್ತಿಯನ್ನು ತೋರಿಸಬೇಕು ! – ಸಂಪಾದಕರು) ನಂತರ ಈ ಟ್ವೀಟ್ ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾಯಿತು. ‘ನೀವೂ ಹಿಂದೂ ಆಗಿದಕ್ಕೆ ನಮಗೆ ನಾಚಿಕೆಯಾಗುತ್ತಿದೆ.’ ‘ನೀವು ಹಿಂದೂ ಧರ್ಮವನ್ನೂ ಏಕೆ ಬಿಡುತ್ತಿಲ್ಲ ?’, ಇಂತಹ ಮಾತುಗಳಲ್ಲಿ ಟೀಕಿಸಲಾಯಿತು.