ಪೊಲೀಸರ ಮೇಲೆ ಕಲ್ಲು ತೂರಾಟಪೊಲೀಸರಿಂದ ಲಾಠಿ ಪ್ರಹಾರ, ಅದೇ ರೀತಿ ಅಶ್ರುವಾಯು ಸಿಡಿಸಿದರು |
|
* ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತಾಂಧರು ಪೊಲೀಸರ ಮೇಲೆ ದಾಳಿ ಮಾಡಲು ಹೇಗೆ ಧೈರ್ಯ ಮಾಡುತ್ತಾರೆ ? -ಸಂಪಾದಕರು * ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರ ವಿರುದ್ಧ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಈಗೇಕೆ ಮಾತನಾಡುತ್ತಿಲ್ಲ ಅಥವಾ ಪೊಲೀಸರ ಮೇಲೆ ದಾಳಿ ಮಾಡುವುದು ಮತಾಂಧರ ‘ಧರ್ಮಸಿದ್ಧ ಅಧಿಕಾರವಾಗಿದೆ’ ಎಂದು ಅನಿಸುತ್ತದೆಯೇ ? – ಸಂಪಾದಕರು |

ಜಬಲಪುರ್ (ಮಧ್ಯಪ್ರದೇಶ) – ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ‘ಮಿಲಾದ್-ಉನ್-ನಬಿ’ ಹಬ್ಬವನ್ನು ಆಚರಿಸಲು ಇಲ್ಲಿನ ಸೂಕ್ಷ್ಮ ಪ್ರದೇಶವಾಗಿರುವ ಮೀನು ಮಾರುಕಟ್ಟೆಯಲ್ಲಿ ಕಾರ್ಯಕ್ರಮದ ಆಯೋಜನೆಯನ್ನು ಮಾಡಲಾಗಿತ್ತು. ಈ ಸಮಯದಲ್ಲಿ ಉಪಸ್ಥಿತರಿಗೆ ನಿಗದಿಪಡಿಸಿದ ಮಾರ್ಗದಲ್ಲಿ ಹೋಗಲು ಪೊಲೀಸರು ವಿನಂತಿಸುತ್ತಿದ್ದರು; ಆದರೆ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭಿಸಲಾಯಿತು. ಬೆಂಕಿ ಹಚ್ಚಿದ ಪಟಾಕಿಗಳನ್ನೂ ಎಸೆಯಲಾಯಿತು. ಆದ್ದರಿಂದ ಪೊಲೀಸರು ಉಪಸ್ಥಿತರಿದ್ದ ಮತಾಂಧರ ಮೇಲೆ ಲಾಠಿ ಪ್ರಹಾರ ಮಾಡಿದರು ಮತ್ತು ನಂತರ ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಿದರು ಎಂದು ಜಬಲಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಬಹುಗುಣಾ ಇವರು ಮಾಹಿತಿ ನೀಡಿದರು.
When requested by the police to follow the pre-determined route, the group refused to budge and got into a scuffle with police personnelhttps://t.co/pQUWzVNNm4
— OpIndia.com (@OpIndia_com) October 20, 2021
ಜಿಲ್ಲಾಧಿಕಾರಿ ಕರ್ಮವೀರ ಶರ್ಮಾ ಇವರು ಪತ್ರಕರ್ತರಿಗೆ ನೀಡಿದ ಮಾಹಿತಿಯಲ್ಲಿ, ಪೊಲೀಸರ ಮೇಲೆ ಸುಡುವ ಪಟಾಕಿ ಮತ್ತು ಕಲ್ಲೆಸೆದವರನ್ನು ಕಂಡುಹಿಡಿಯಲಾಗಿದೆ ಹಾಗೂ ಅವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ