
ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಪಂಚ ಪರಮೇಶ್ವರರು (೫ ಪಂಚರು) ಮಹಂತ ನರೇಂದ್ರ ಗಿರಿಯವರ ಇಚ್ಛಾನುಸಾರ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಮುಂಬರುವ ಅಕ್ಟೋಬರ ೫ನೇಯ ತಾರೀಖಿನಂದು ಬಾಘಂಬರೀ ಮಠದ ಹೊಣೆಯನ್ನು ಅವರಿಗೆ ಒಪ್ಪಿಸಲಾಗುವುದು. ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಸಾವಿನ ಬಳಿಕ ಅವರ ಕೋಣೆಯಲ್ಲಿ ಒಂದು ಪತ್ರ ಸಿಕ್ಕಿತ್ತು, ಅದರಲ್ಲಿ ಅವರು ಬಲವೀರ ಗಿರಿಯವರನ್ನು ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿದ್ದರು; ಆದರೆ ಮಠದ ಪಂಚ ಪರಮೇಶ್ವರರು ಆ ಪತ್ರವನ್ನು ನಕಲಿ ಎಂದು ಹೇಳಿ ಬಲವೀರ ಗಿರಿಯವರನ್ನು ಅವರ ಉತ್ತರಾಧಿಕಾರಿಯಾಗಿ ಮಾಡಲು ನಿರಾಕರಿಸಿದ್ದರು. ಅನಂತರ ನರೇಂದ್ರ ಗಿರಿಯವರು ಜೂನ ೨೦೨೦ರಲ್ಲಿ ಮಾಡಿಟ್ಟಿದ್ದ ಮೃತ್ಯುಪತ್ರವನ್ನು ಬಹಿರಂಗ ಪಡಿಸಲಾಯಿತು, ಅದರಲ್ಲಿ ಅವರು ಬಲವೀರ ಗಿರಿಯವರನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದರು. ಆ ಆಧಾರದ ಮೇಲೆ ಬಲವೀರ ಗಿರಿಯವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು.
#Prayagraj: बलबीर गिरि होंगे महंत नरेंद्र गिरि के उत्तराधिकारी, पंच परमेश्वरों ने इस आधार पर सुनाया फैसला#NarendraGiri | #NarendraGiriDeath | #BalbirGirihttps://t.co/G93XGw8hRy
— TV9 Bharatvarsh (@TV9Bharatvarsh) September 29, 2021
ಸಿಬಿಐನಿಂದ ನರೇಂದ್ರ ಗಿರಿಯವರ ಮೃತ್ಯುವಿನ ಅನ್ವೇಷಣೆ ಪ್ರಾರಂಭ
ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಮೃತ್ಯುವಿನ ಪ್ರಕರಣದಲ್ಲಿ ಸಿಬಿಐಯು ಕಳೆದ ೬ ದಿನಗಳಿಂದ ಅನ್ವೇಷಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಸಿಬಿಐಯು ಬಂಧಿಸಿರುವ ಆನಂದ ಗಿರಿ, ಆದ್ಯಾಪ್ರಸಾದ ತಿವಾರಿ ಹಾಗೂ ಸಂದೀಪ ತಿವಾರಿಯವರನ್ನು ಸ್ವತಂತ್ರವಾಗಿ ೭ ಗಂಟೆಗಳ ಕಾಲ ವಿಚಾರಣೆ ನಡೆಸಿತು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath