
ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಪಂಚ ಪರಮೇಶ್ವರರು (೫ ಪಂಚರು) ಮಹಂತ ನರೇಂದ್ರ ಗಿರಿಯವರ ಇಚ್ಛಾನುಸಾರ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಮುಂಬರುವ ಅಕ್ಟೋಬರ ೫ನೇಯ ತಾರೀಖಿನಂದು ಬಾಘಂಬರೀ ಮಠದ ಹೊಣೆಯನ್ನು ಅವರಿಗೆ ಒಪ್ಪಿಸಲಾಗುವುದು. ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಸಾವಿನ ಬಳಿಕ ಅವರ ಕೋಣೆಯಲ್ಲಿ ಒಂದು ಪತ್ರ ಸಿಕ್ಕಿತ್ತು, ಅದರಲ್ಲಿ ಅವರು ಬಲವೀರ ಗಿರಿಯವರನ್ನು ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿದ್ದರು; ಆದರೆ ಮಠದ ಪಂಚ ಪರಮೇಶ್ವರರು ಆ ಪತ್ರವನ್ನು ನಕಲಿ ಎಂದು ಹೇಳಿ ಬಲವೀರ ಗಿರಿಯವರನ್ನು ಅವರ ಉತ್ತರಾಧಿಕಾರಿಯಾಗಿ ಮಾಡಲು ನಿರಾಕರಿಸಿದ್ದರು. ಅನಂತರ ನರೇಂದ್ರ ಗಿರಿಯವರು ಜೂನ ೨೦೨೦ರಲ್ಲಿ ಮಾಡಿಟ್ಟಿದ್ದ ಮೃತ್ಯುಪತ್ರವನ್ನು ಬಹಿರಂಗ ಪಡಿಸಲಾಯಿತು, ಅದರಲ್ಲಿ ಅವರು ಬಲವೀರ ಗಿರಿಯವರನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದರು. ಆ ಆಧಾರದ ಮೇಲೆ ಬಲವೀರ ಗಿರಿಯವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು.
#Prayagraj: बलबीर गिरि होंगे महंत नरेंद्र गिरि के उत्तराधिकारी, पंच परमेश्वरों ने इस आधार पर सुनाया फैसला#NarendraGiri | #NarendraGiriDeath | #BalbirGirihttps://t.co/G93XGw8hRy
— TV9 Bharatvarsh (@TV9Bharatvarsh) September 29, 2021
ಸಿಬಿಐನಿಂದ ನರೇಂದ್ರ ಗಿರಿಯವರ ಮೃತ್ಯುವಿನ ಅನ್ವೇಷಣೆ ಪ್ರಾರಂಭ
ಮಹಂತ ನರೇಂದ್ರ ಗಿರಿಯವರ ಸಂಶಯಾಸ್ಪದ ಮೃತ್ಯುವಿನ ಪ್ರಕರಣದಲ್ಲಿ ಸಿಬಿಐಯು ಕಳೆದ ೬ ದಿನಗಳಿಂದ ಅನ್ವೇಷಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಸಿಬಿಐಯು ಬಂಧಿಸಿರುವ ಆನಂದ ಗಿರಿ, ಆದ್ಯಾಪ್ರಸಾದ ತಿವಾರಿ ಹಾಗೂ ಸಂದೀಪ ತಿವಾರಿಯವರನ್ನು ಸ್ವತಂತ್ರವಾಗಿ ೭ ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!