ತರಣತಾರಣ (ಪಂಜಾಬ) ದಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳು ಜಪ್ತಿ

ಈ ಭಯೋತ್ಪಾದರನ್ನು ಆಜೀವನಯಪರ್ಯಂತ ಸಾಕುವ ಬದಲು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲು ಶಿಕ್ಷೆಯಾಗಲು ಪ್ರಯತ್ನ ಮಾಡಬೇಕು ! – ಸಂಪಾದಕರು 

ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದ ಪೊಲೀಸರು

ತರಣತಾರಣ(ಪಂಜಾಬ) – ಪಂಜಾಬ ಪೊಲೀಸರು ಇಲ್ಲಿಂದ ಕುಲವಿಂದರ ಸಿಂಹ, ಕಮಲಪ್ರೀತ ಸಿಂಹ ಮಾನ ಮತ್ತು ಕಂವರ ಪಾಲ್ ಸಿಂಹ ಈ ಮೂವರು ಖಲಿಸ್ತಾನಿ ಭಯೋತ್ಪಾದರನ್ನು ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳ ಸಹಿತ ಬಂಧಿಸಿದ್ದಾರೆ. ಇವರೆಲ್ಲರೂ ಮೋಗಾ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಅವರು ಪಂಜಾಬಿನಲ್ಲಿ ಭಯೋತ್ಪಾದಕ ದಾಳಿ ಮಾಡುವ ಸಿದ್ಧತೆಯಲ್ಲಿದ್ದರು. ಪೊಲೀಸರು ಈಗ ಅಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.