ಸಹೋದ್ಯೋಗಿ ಪುರುಷ ಅಧಿಕಾರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿರುವ ಬಗ್ಗೆ ಆಕ್ಷೇಪಿಸಿ ಥಳಿತ
ಹಿಂದೂಗಳನ್ನು ತಾಲಿಬಾಲಿ ಮತ್ತು ಅಸಹಿಷ್ಣು ಎನ್ನುವವರು ಇಂತಹ ಘಟನೆಗಳ ಬಗ್ಗೆ ಏಕೆ ಮೌನವಾಗಿರುತ್ತಾರೆ ? – ಸಂಪಾದಕರು

ಬೆಂಗಳೂರು – ಇಲ್ಲಿ ಬ್ಯಾಂಕ್ನ ಓರ್ವ ಮುಸ್ಲಿಂ ಮಹಿಳಾ ಅಧಿಕಾರಿಯನ್ನು ಮತ್ತು ಆಕೆಯ ಸಹೋದ್ಯೋಗಿಯನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮತಾಂಧರನ್ನು ಬಂಧಿಸಿದ್ದಾರೆ.
(ಸೌಜನ್ಯ: IndianExpressOnline)
35 ವರ್ಷದ ಮಹಿಳಾ ಅಧಿಕಾರಿಯೊಬ್ಬರು ಕೆಲಸದಲ್ಲಿ ತಡವಾದಾಗ ಆಕೆಯ ಸಹೋದ್ಯೋಗಿ ಆಕೆಯನ್ನು ದ್ವಿಚಕ್ರ ವಾಹನದಲ್ಲಿ ಮನೆಗೆ ಬಿಡಲು ಹೋಗಿದ್ದರು. ಈ ಮಹಿಳೆಯು ಬುರ್ಖಾ ಧರಿಸಿದ್ದಳು. ಆ ಸಮಯದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮತಾಂಧರು ಅಧಿಕಾರಿಗಳನ್ನು ಅಡ್ಡಗಟ್ಟಿದರು ಮತ್ತು ಮಹಿಳಾ ಅಧಿಕಾರಿಯು ಪುರುಷ ಅಧಿಕಾರಿಯೊಂದಿಗೆ ಹೋಗುವುದನ್ನು ಆಕ್ಷೇಪಿಸಿದರು. ಜೊತೆಗೆ ಮಹಿಳೆಯಿಂದ ಆಕೆಯ ಪತಿಯ ಮೊಬೈಲ್ ಸಂಖ್ಯೆಯನ್ನು ಕೂಡ ತೆಗೆದುಕೊಂಡು ಆತನಿಗೆ ಮಾಹಿತಿ ನೀಡಿದ್ದಾರೆ. ಆಗ ಪತಿಯು ಅವರಿಗೆ ತನಗೆ ಈ ಪ್ರಸಂಗದ ಬಗ್ಗೆ ತಿಳಿದಿದೆ ಮತ್ತು ಪುರುಷ ಅಧಿಕಾರಿಯ ಪರಿಚಯವಿದೆ ಎಂದು ತಿಳಿಸಿದರು. ಆದರೂ ಇಬ್ಬರು ಮತಾಂಧರು ಮಹಿಳೆ ಮತ್ತು ಪುರುಷ ಸಹೋದ್ಯೋಗಿಯನ್ನು ಥಳಿಸಿದರು. ಅವರು ಮಹಿಳೆಯನ್ನು ರಿಕ್ಷಾದಲ್ಲಿ ಮನೆಗೆ ಕಳುಹಿಸಿದರು. ಈ ಘಟನೆಯು ಸಿಸಿಟಿವಿಯಲ್ಲಿ ಚಿತ್ರೀಕರಣಗೊಂಡಿದೆ. ಆ ವಿಡಿಯೋ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು.
Karnataka: Cops arrest 2 youths for assaulting Hindu-Muslim duo who travelled together https://t.co/7gGd5YzTmz
— Republic (@republic) September 19, 2021
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!