ಉಪಚಾರದ ಸಮಯದಲ್ಲಿ ಸಾವನ್ನಪ್ಪಿದ ಸಂತ್ರಸ್ತೆ
ದೆಹಲಿಯಲ್ಲಿನ ‘ನಿರ್ಭಯ’ ಬಲಾತ್ಕಾರ ಪ್ರಕರಣದಂತಹ ಇನ್ನೊಂದು ಅಮಾನುಷ ಪ್ರಕರಣ. ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಬಲಾತ್ಕಾರ ಮಾಡುವವರಿಗೆ ಕಠೋರ ಶಿಕ್ಷೆಯಾಗುತ್ತಿಲ್ಲ, ಇದರಿಂದ ಬಲಾತ್ಕಾರಿಗಳಿಗೆ ಕುಮ್ಮಕ್ಕು ಸಿಕ್ಕಿದಂತಾಗಿ ಅಪರಾಧಗಳು ಹೆಚ್ಚಾಗುತ್ತಿವೆ. ಬಲಾತ್ಕಾರ ಮಾಡುವವರಿಗೆ ಕಠಿಣ ಶಿಕ್ಷೆ ನೀಡಿ ಅದರ ಮೇಲೆ ತಕ್ಷಣ ಕಾರ್ಯಾಚರಣೆ ಮಾಡಿದರೆ ಅಪರಾಧಿಗಳು ಪಾಠ ಕಲಿಯುತ್ತಾರೆ.- ಸಂಪಾದಕರು

ಮುಂಬೈ – ಇಲ್ಲಿನ ಸಾಕಿನಾಕಾ ಪರಿಸರದಲ್ಲಿ ಸೆಪ್ಟೆಂಬರ್ 10 ರಂದು ಬಲಾತ್ಕಾರಕ್ಕೊಳಗಾದ ಸಂತ್ರಸ್ತೆಯು ರಾಜಾವಾಡಿಯಲ್ಲಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ನರಾಧಮರು ಬಲಾತ್ಕಾರದ ನಂತರ ಗುಪ್ತಾಂಗದಲ್ಲಿ ರಾಡ್ ತುರುಕಿದ್ದರಿಂದ ರಕ್ತಸ್ರಾವವಾಗಿ ಆಕೆಯು ಪ್ರಜ್ಞಾ ಶೂನ್ಯಳಾಗಿದ್ದಳು. ಪೊಲೀಸರು ಆಕೆಯನ್ನು ರಾಜಾವಾಡಿ ಆಸ್ಪತ್ರೆಗೆ ಒಯ್ದಾಗ ಆಕೆಯ ಮೇಲೆ ಉಪಚಾರವನ್ನು ಆರಂಭಿಸಲಾಯಿತು; ಆದರೆ ಉಪಚಾರದ ಸಮಯದಲ್ಲಿ ಆಕೆಯು ಸಾವನ್ನಪ್ಪಿದಳು. ಪೊಲೀಸರು ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದು ಇತರ ಆರೋಪಿಗಳ ಶೋಧಕಾರ್ಯ ನಡೆಯುತ್ತಿದೆ. ಈ ಘಟನೆಯಿಂದ ದೇಶದಾದ್ಯಂತ ಸಂತಾಪ ವ್ಯಕ್ತವಾಗುತ್ತಿದ್ದು ಪುನಃ ಇನ್ನೊಮ್ಮೆ ಮಹಿಳೆಯರ ಸುರಕ್ಷತೆಯ ಪ್ರಶ್ನೆಯೂ ಎದ್ದು ನಿಂತಿದೆ.
Mumbai woman, raped and brutalised in Saki Naka, dies in hospital https://t.co/OrHYSwLr89
— The Times Of India (@timesofindia) September 11, 2021
ಪೊಲೀಸರು ನೀಡಿರುವ ಮಾಹಿತಿಗನುಸಾರ ಸಪ್ಟೆಂಬರ್ 10 ಬೆಳಗಿನ ಜಾವ ಮೂರೂವರೆ ಗಂಟೆಯ ಹೊತ್ತಿಗೆ ಪೊಲೀಸ್ ನಿಯಂತ್ರಣ ಕಕ್ಷೆಗೆ ಸಾಕಿನಾಕದಲ್ಲಿನ ಖೈರಾನ ರಸ್ತೆಯಲ್ಲಿ ಓರ್ವ ಮಹಿಳೆಯು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂಬ ದೂರವಾಣಿ ಬಂದಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ ನಂತರ ಮಹಿಳೆಯನ್ನು ಘಾಟ್ಕೋಪರನಲ್ಲಿರುವ ರಾಜಾವಾಡಿ ಆಸ್ಪತ್ರೆಯಲ್ಲಿ ಸೇರಿಸಿದರು. ಪೊಲೀಸರಿಗೆ ಈಗ ಘಟನೆಯ ಸಿಸಿಟಿವಿ ಫುಟೇಜ್ ಸಿಕ್ಕಿದ್ದು ಮೋಹನ ಚೌಹಾನ ಎಂಬ ಹೆಸರಿನ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ತಪಾಸಣೆಯನ್ನು ಮುಂದುವರೆಸಿದ್ದಾರೆ. ಗಣೇಶೋತ್ಸವದ ಸಮಯದಲ್ಲಿ ನಡೆದಂತಹ ಇಂತಹ ಭೀಷಣ ಘಟನೆಯಿಂದಾಗಿ ಮುಂಬೈ ನಗರವು ತತ್ತರಿಸಿದೆ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case