|
ಈ ಚಿತ್ರವನ್ನು ಹಾಕುವ ಉದ್ದೇಶ ಯಾರ ಭಾವನೆಗೆ ನೋವನ್ನು ಉಂಟು ಮಾಡುವುದಾಗಿರದೆ ನಿಜವಾದ ಸ್ಥಿತಿ ತಿಳಿಸುವ ಉದ್ದೇಶವಾಗಿದೆ.
ಮುಂಬಯಿ, ೬ ಸೆಪ್ಟೆಂಬರ(ವಾರ್ತೆ.) – ‘ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಶ್ರೀಗಣೇಶನ ಆಗಮನ ಆಗಲಿದೆ’, ಎಂಬ ಸಂಕಲ್ಪನೆಯನ್ನು ಇಟ್ಟುಕೊಂಡು ಶ್ರೀಗಣೇಶನ ಚಿತ್ರ ಇರುವ ಪಾಸ್ ಪೋರ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಶ್ರೀಗಣೇಶ ದೇವರನ್ನು ಅಪಮಾನಿಸುತ್ತಿರುವ ಘಟನೆಯು ಬೆಳಕಿಗೆ ಬಂದಿದೆ. ಈ ಪಾಸ್ ಪೋರ್ಟ್ನ ಮೇಲೆ ಭಾಗ್ಯನಗರ (ಹೈದರಾಬಾದ) ಪಾಸ್ಪೋರ್ಟ್ ಕಚೇರಿಯ ಮೊಹರು ಇದೆ ಮತ್ತು ಪಾಸ್ ಪೋರ್ಟ್ ಅನ್ನು ಕೊಟ್ಟಿರುವ ಅಧಿಕಾರಿ ಎಂದು ಪಿ ಕೃಷ್ಣ ಚಾರ್ಯ ಎಂನವರ ಹೆಸರು ಮತ್ತು ಸಹಿ ಇದೆ. ಈ ಪಾಸ್ಪೋರ್ಟ್ ಅನ್ನು ತಮಾಷೆಗೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ.
ಈ ಪಾಸ್ ಪೋರ್ಟ್ನ ಮೇಲೆ ಶ್ರೀ ಗಣೇಶನ ಚಿತ್ರ ಮುದ್ರಿಸಿ ಅದರ ಮೇಲೆ ರಾಷ್ಟ್ರೀಯತೆ ‘ಭಾರತೀಯ’, ಜನ್ಮಸ್ಥಳ ‘ಹಿಮಾಲಯ’, ವಾಸಸ್ಥಳ ‘ಸ್ವರ್ಗ’, ಪ್ರವಾಸ ಮಾಡುವ ಸ್ಥಳ ‘ಮುಂಬಯಿ’, ತಂದೆ ‘ಶಿವ’, ತಾಯಿ ‘ಪಾರ್ವತಿ’, ಮತ್ತು ಪಾಸ್ಪೋರ್ಟ್ನ ಕಾಲಾವಧಿ ‘ಶಾಶ್ವತ’, ಎಂದು ವಿವರಗಳನ್ನು ಬರೆಯಲಾಗಿದೆ.
ಈ ಪಾಸ್ಪೋರ್ಟ್ ಕೊಟ್ಟಿರುವ ಅಧಿಕಾರಿ ಪಿ ಕೃಷ್ಣ ಚಾರ್ಯಾ ಇವರ ಹೆಸರನ್ನು ದೃಢೀಕರಿಸಲು, ಹಾಗೂ ಪಾಸ್ಪೋರ್ಟ್ ಮೇಲಿನ ಸಹಿ ಮತ್ತು ಠಸ್ಸೆ(ಮೊಹರು)ಯ ವಿಷಯವಾಗಿ ಸತ್ಯಾಸತ್ಯತೆ ಪರೀಕ್ಷಿಸಲು ದೈನಿಕ ‘ಸನಾತನ ಪ್ರಭಾತ’ನ ಪ್ರತಿನಿಧಿಗಳು ಭಾಗ್ಯನಗರದ ಪಾಸ್ಪೋರ್ಟ್ ಕಾರ್ಯಾಲಯಕ್ಕೆ ೦೪೦-೨೭೭೧೫೩೩೩ ಈ ಸಂಪರ್ಕ ಸಂಖ್ಯೆಗೆ ಕರೆ ಮಾಡಲು ಪ್ರಯತ್ನ ಮಾಡಿದರು; ಆದರೆ ಸಂಪರ್ಕ ಮಾಡಲು ಪದೇಪದೇ ಬರುವ ಅಡಚಣೆಯಿಂದ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ. ಈ ವಿಷಯವಾಗಿ ದೈನಿಕ ‘ಸನಾತನ ಪ್ರಭಾತ’ನ ಪ್ರತಿನಿಧಿಯು ಹೈದ್ರಾಬಾದ್ ಪಾಸ್ಪೋರ್ಟ್ ಕಾರ್ಯಾಲಯದ ‘[email protected]’ ಈ ಅಧಿಕೃತ ಇ-ಮೇಲ್ ವಿಳಾಸಕ್ಕೆ ಪತ್ರ ಕಳಿಸಿ ಶ್ರೀಗಣೇಶನ ಮಾಡಲಾಗಿರುವ ವಿಡಂಬನೆಯ ವಿಷಯವಾಗಿ ಸ್ಪಷ್ಟೀಕರಣ ನೀಡುವಂತೆ ಕರೆ ಕೊಟ್ಟಿದ್ದಾರೆ

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ