|
* ಭಯೋತ್ಪಾದಕರು ಮತ್ತು ಮತಾಂಧರನ್ನು ವೈಭವೀಕರಿಸುವುದು ಕಾಂಗ್ರೆಸ್ಸಿನ ‘ಪರಂಪರೆ’ಯಾಗಿದೆ. ಇಂತಹ ಪಕ್ಷದವರು ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದರು, ಎಂಬುದು ಖೇದಕರ ! – ಸಂಪಾದಕರು * ‘ಭಾರತದಲ್ಲಿ ಜಾತ್ಯತೀತತೆ ಬೇಕು’, ಎನ್ನುವ ಮತಾಂಧರಿಗೆ ಅಫ್ಘಾನಿಸ್ತಾನದಲ್ಲಿ ಮಾತ್ರ ಶರಿಯತ್ನ ರಾಜ್ಯ ಬೇಕು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು |

ರಾಂಚಿ (ಜಾರ್ಖಂಡ) – ಅಫ್ಘಾನಿಸ್ತಾನದಿಂದ ಅಮೇರಿಕಾದವರನ್ನು ಓಡಿಸಿದುದಕ್ಕಾಗಿ ತಾಲಿಬಾನಿಗಳನ್ನು ಶ್ಲಾಘಿಸಲೇಬೇಕು. ಅಮೆರಿಕಾವು ಅಫ್ಘಾನಿಸ್ತಾನದಲ್ಲಿ ಎಷ್ಟೊಂದು ದೌರ್ಜನ್ಯ ನಡೆಸುತ್ತಿತ್ತು, ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿಯ ಜನರು ಈಗ ತುಂಬಾ ಸಂತೋಷದಲ್ಲಿದ್ದಾರೆ. ಅಮೆರಿಕಾದವರು ಅಲ್ಲಿಗೆ ಹೋಗಿ ಅಫಫಾನಿಗಳ ಮತ್ತು ತಾಲಿಬಾನಿಗಳ ಮೇಲೆ ದೌರ್ಜನ್ಯ ನಡೆಸುತ್ತಿತ್ತು. ತಾಯಿ-ಸಹೋದರಿಯರು ಮತ್ತು ಮಕ್ಕಳಿಗೂ ತೊಂದರೆ ಕೊಡುತ್ತಿದ್ದರು. ಅದರ ವಿರುದ್ಧವೇ ಈ ಹೋರಾಟವಿತ್ತು. ಹಾಗೆಯೇ ಏನೆಲ್ಲ(ತಾಲಿಬಾನಿಗಳ ವಿರುದ್ಧ) ಪ್ರಸಾರ ಮಾಡಲಾಗುತ್ತಿತ್ತೋ ಅದೆಲ್ಲವೂ ತಪ್ಪಾಗಿದೆ, ಎಂದು ಕಾಂಗ್ರೆಸ್ನ ಸಂಸದ ಇರ್ಫಾನ್ ಅನ್ಸಾರಿ ಇವರು ಪ್ರಸಾರ ಮಾಧ್ಯಮದವರ ಜೊತೆ ಮಾತನಾಡುವಾಗ ಹೇಳಿದರು.
ಬಿಜೆಪಿಯ ಪ್ರದೇಶಾಧ್ಯಕ್ಷ ದೀಪಕ ಪ್ರಕಾಶ ಇವರು ಅನ್ಸಾರಿಯವರ ಹೇಳಿಕೆಯನ್ನು ಟೀಕಿಸುತ್ತಾ, ಯಾವ ಸಂಘಟನೆ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದರಲ್ಲಿ ಕುಖ್ಯಾತವಾಗಿದೆಯೋ, ಅಂತಹ ಭಯೋತ್ಪಾದಕ ಸಂಘಟನೆಗೆ ಅನ್ಸಾರಿ ಬೆಂಬಲ ನೀಡುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಜನರು ಪಲಾಯನ ಮಾಡುತ್ತಿದ್ದಾರೆ. ಅನ್ಸಾರಿ ಇವರು ಭಾರತದಲ್ಲಿಯೂ ಇಂತಹ ಪರಿಸ್ಥಿತಿಯನ್ನು ನೋಡಲು ಬಯಸುತ್ತಿದ್ದಾರೇನು ? ಎಂದು ಪ್ರಕಾಶ ಇವರು ಪ್ರಶ್ನಿಸಿದರು.
Jharkhand Congress MLA Irfan Ansari praises Taliban for chasing away Americans, claims foreign troops committed atrocities and Afghans happy nowhttps://t.co/i9Lx89EFdf
— OpIndia.com (@OpIndia_com) September 3, 2021
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಲ್ಲಿ ಸ್ಫೋಟ : Hormuz Oil Tanker Explosion