|
* ಭಯೋತ್ಪಾದಕರು ಮತ್ತು ಮತಾಂಧರನ್ನು ವೈಭವೀಕರಿಸುವುದು ಕಾಂಗ್ರೆಸ್ಸಿನ ‘ಪರಂಪರೆ’ಯಾಗಿದೆ. ಇಂತಹ ಪಕ್ಷದವರು ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದರು, ಎಂಬುದು ಖೇದಕರ ! – ಸಂಪಾದಕರು * ‘ಭಾರತದಲ್ಲಿ ಜಾತ್ಯತೀತತೆ ಬೇಕು’, ಎನ್ನುವ ಮತಾಂಧರಿಗೆ ಅಫ್ಘಾನಿಸ್ತಾನದಲ್ಲಿ ಮಾತ್ರ ಶರಿಯತ್ನ ರಾಜ್ಯ ಬೇಕು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು |

ರಾಂಚಿ (ಜಾರ್ಖಂಡ) – ಅಫ್ಘಾನಿಸ್ತಾನದಿಂದ ಅಮೇರಿಕಾದವರನ್ನು ಓಡಿಸಿದುದಕ್ಕಾಗಿ ತಾಲಿಬಾನಿಗಳನ್ನು ಶ್ಲಾಘಿಸಲೇಬೇಕು. ಅಮೆರಿಕಾವು ಅಫ್ಘಾನಿಸ್ತಾನದಲ್ಲಿ ಎಷ್ಟೊಂದು ದೌರ್ಜನ್ಯ ನಡೆಸುತ್ತಿತ್ತು, ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿಯ ಜನರು ಈಗ ತುಂಬಾ ಸಂತೋಷದಲ್ಲಿದ್ದಾರೆ. ಅಮೆರಿಕಾದವರು ಅಲ್ಲಿಗೆ ಹೋಗಿ ಅಫಫಾನಿಗಳ ಮತ್ತು ತಾಲಿಬಾನಿಗಳ ಮೇಲೆ ದೌರ್ಜನ್ಯ ನಡೆಸುತ್ತಿತ್ತು. ತಾಯಿ-ಸಹೋದರಿಯರು ಮತ್ತು ಮಕ್ಕಳಿಗೂ ತೊಂದರೆ ಕೊಡುತ್ತಿದ್ದರು. ಅದರ ವಿರುದ್ಧವೇ ಈ ಹೋರಾಟವಿತ್ತು. ಹಾಗೆಯೇ ಏನೆಲ್ಲ(ತಾಲಿಬಾನಿಗಳ ವಿರುದ್ಧ) ಪ್ರಸಾರ ಮಾಡಲಾಗುತ್ತಿತ್ತೋ ಅದೆಲ್ಲವೂ ತಪ್ಪಾಗಿದೆ, ಎಂದು ಕಾಂಗ್ರೆಸ್ನ ಸಂಸದ ಇರ್ಫಾನ್ ಅನ್ಸಾರಿ ಇವರು ಪ್ರಸಾರ ಮಾಧ್ಯಮದವರ ಜೊತೆ ಮಾತನಾಡುವಾಗ ಹೇಳಿದರು.
ಬಿಜೆಪಿಯ ಪ್ರದೇಶಾಧ್ಯಕ್ಷ ದೀಪಕ ಪ್ರಕಾಶ ಇವರು ಅನ್ಸಾರಿಯವರ ಹೇಳಿಕೆಯನ್ನು ಟೀಕಿಸುತ್ತಾ, ಯಾವ ಸಂಘಟನೆ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದರಲ್ಲಿ ಕುಖ್ಯಾತವಾಗಿದೆಯೋ, ಅಂತಹ ಭಯೋತ್ಪಾದಕ ಸಂಘಟನೆಗೆ ಅನ್ಸಾರಿ ಬೆಂಬಲ ನೀಡುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಜನರು ಪಲಾಯನ ಮಾಡುತ್ತಿದ್ದಾರೆ. ಅನ್ಸಾರಿ ಇವರು ಭಾರತದಲ್ಲಿಯೂ ಇಂತಹ ಪರಿಸ್ಥಿತಿಯನ್ನು ನೋಡಲು ಬಯಸುತ್ತಿದ್ದಾರೇನು ? ಎಂದು ಪ್ರಕಾಶ ಇವರು ಪ್ರಶ್ನಿಸಿದರು.
Jharkhand Congress MLA Irfan Ansari praises Taliban for chasing away Americans, claims foreign troops committed atrocities and Afghans happy nowhttps://t.co/i9Lx89EFdf
— OpIndia.com (@OpIndia_com) September 3, 2021
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ