ಆ ಉದ್ಯಮದವರು ಹಾಲು ಮಾರಾಟ ಮಾಡಲಿ ! ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಲಹೆ
ದೇಶದಲ್ಲಿ ಪ್ರತಿಯೊಂದು ತೀರ್ಥಸ್ಥಾನದಲ್ಲಿಯೂ ಈ ರೀತಿ ನಿರ್ಬಂಧ ಹೇರುವ ಆದೇಶವನ್ನು ಕೇಂದ್ರ ಸರಕಾರವು ನೀಡಲಿ ಎಂದು ಹಿಂದೂಗಳಿಗೆ ಅನಿಸುತ್ತದೆ ! ಉತ್ತರಪ್ರದೇಶ ಸರಕಾರಕ್ಕೆ ಮಾಡಲು ಸಾಧ್ಯವಿರುವಂತಹ ವಿಷಯವು ಕೇಂದ್ರ ಸರಕಾರಕ್ಕೆ, ಹಾಗೂ ಅನ್ಯ ಭಾಜಪ ಆಡಳಿತವಿರುವ ರಾಜ್ಯಗಳಿಗೂ ಸಹಜವಾಗಿ ಸಾಧ್ಯವಿದೆ, ಎಂಬುದರಲ್ಲಿ ಅನುಮಾನವೇ ಇಲ್ಲ !
ಮಥುರಾ (ಉತ್ತರಪ್ರದೇಶ) – ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರು ಮಥುರಾದಲ್ಲಿ ಮಧ್ಯ ಹಾಗೂ ಮಾಂಸದ ಮಾರಾಟದ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರುವಂತೆ ಆದೇಶ ನೀಡಿದ್ದಾರೆ. ಆಗಸ್ಟ್ ೩೦ ರಿಂದ ಈ ಆದೇಶವು ಅನ್ವಯವಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇಲ್ಲಿ ‘ಕೃಷ್ಣೋತ್ಸವ ೨೦೨೧ ಎಂಬ ಶ್ರೀಕೃಷ್ಣ ಜಯಂತಿಯ ನಿಮಿತ್ತ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಈ ಮಾಹಿತಿಯನ್ನು ನೀಡಿದರು.
CM Adityanath announces ban on sale of liquor & meat in Mathura on eve of Janmashtami https://t.co/T16orBxGJQ
— Republic (@republic) August 31, 2021
೧. ತಮ್ಮ ಭಾಷಣದಲ್ಲಿ ಯೋಗಿ ಆದಿತ್ಯನಾಥರು ಮುಂದಿನಂತೆ ನುಡಿದರು, ಮಾಂಸ ಹಾಗೂ ಮಧ್ಯದ ಅಂಗಡಿಗಳಿರುವವರು ಈಗ ಹಾಲು ಮಾರಾಟ ಮಾಡಿ ಮಥುರೆಗೆ ಮತ್ತೊಮ್ಮೆ ಹಳೆಯ ಪರಿಚಯ ಮಾಡಿಕೊಡಲಿ. ಮಥುರೆಯು ಹಿಂದೆ ಉತ್ತಮ ಮಟ್ಟದ ಹಾಲು ಉತ್ಪಾದಕ ನಗರವೆಂದು ಗುರುತಿಸಲ್ಪಡುತ್ತಿತ್ತು.
೨. ಯೋಗಿ ಆದಿತ್ಯನಾಥರು ಭಗವಾನ್ ಶ್ರೀಕೃಷ್ಣನ ಬಳಿ ಕೊರೊನಾ ವೈರಾಣುವನ್ನು ನಾಶ ಮಾಡಲು ಪ್ರಾರ್ಥನೆ ಮಾಡಿದರು. (ಎಷ್ಟು ಆಡಳಿತಗಾರರು ಈ ರೀತಿಯ ಪ್ರಾರ್ಥನೆ ಮಾಡುತ್ತಾರೆ ? – ಸಂಪಾದಕರು) ‘ನಾವು ಆಧುನಿಕ ತಂತ್ರಜ್ಞಾನ ಹಾಗೂ ಸಂಸ್ಕೃತಿ, ಹಾಗೂ ಅಧ್ಯಾತ್ಮದ ಸುಗಮ ಸಂಗಮ ಮಾಡಿ ಮಥುರೆಯ ಈ ಬೃಜ ಪ್ರದೇಶವನ್ನು ವಿಕಾಸಗೊಳಿಸಲು ಪ್ರಯತ್ನಿಸಲಿದ್ದೇವೆ, ಎಂದು ಯೋಗಿ ಆದಿತ್ಯನಾಥರು ಹೇಳಿದರು.

ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ