ದೇವಸ್ಥಾನ ಸರಕಾರೀಕರಣದ ವಿರುದ್ಧ ಆಂದೋಲನ ಮಾಡುವ ನಿರ್ಣಯ ತೆಗೆದುಕೊಂಡಿರುವ ಶ್ರೀ ರಾಜಪೂತ ಕರಣಿ ಸೇನೆಗೆ ಅಭಿನಂದನೆಗಳು ! ದೇವಸ್ಥಾನಗಳ ಸರಕಾರಿಕರಣ ಮಾಡಿ ಅವುಗಳ ಅರ್ಪಣೆಗಳ ಮೇಲೆ ಕೈಹಾಕಲು ನೋಡುವ ಕಾಂಗ್ರೆಸ್ ಸರಕಾರದ ವಿರುದ್ಧ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ !
ಜಯಪುರ (ರಾಜಸ್ಥಾನ) – ರಾಜಸ್ಥಾನ ಸರಕಾರವು ಮೆಹಂದಿಪುರದಲ್ಲಿನ ಪ್ರಸಿದ್ಧ ಬಾಲಾಜಿ ದೇವಸ್ಥಾನದ ಸರಕಾರಿಕರಣ ಮಾಡಲು ಪ್ರಯತ್ನಿಸುತ್ತಿದೆ. ಸರಕಾರವು ತನ್ನ ತಲೆಯಿಂದ ಸರಕಾರಿಕರಣದ ವಿಚಾರವನ್ನು ತೆಗೆದುಹಾಕಬೇಕು. ಶ್ರೀ ರಾಜಪೂತ ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಮಹಿಪಾಲಸಿಂಹ ಮಕರಾನ ಇವರು ‘ಮೆಂಹದಿಪೂರದಲ್ಲಿನ ಬಾಲಾಜಿ ದೇವಸ್ಥಾನ ಮತ್ತು ರಾಜ್ಯದಲ್ಲಿನ ಇತರ ದೇವಸ್ಥಾನಗಳ ಸರಕಾರೀಕರಣವಾಗಲು ಬಿಡುವುದಿಲ್ಲ. ನಾವು ಸರಕಾರದ ವಿರುದ್ಧ ಆಂದೋಲನ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಮಕಾರಾನ ಇವರು ಈ ಮೊದಲು ಮೆಹಂದಿಪುರ್ ಬಾಲಾಜಿ ಮಂದಿರಕ್ಕೆ ಹೋಗಿ ಬ್ರಹ್ಮಲೀನ ಮಹಂತ ಕಿಶೋರಪುರಿ ಮಹಾರಾಜರ ಛಾಯಾಚಿತ್ರಗಳ ಮೇಲೆ ಪುಷ್ಪವನ್ನು ಅರ್ಪಿಸಿ ದರ್ಶನ ಪಡೆದರು. ಈ ಮಂದಿರದ ಪ್ರಮುಖ ಮಹಂತರಾದ ಕಿಶೋರಪುರಿ ಮಹಾರಾಜರು ಕೆಲವು ದಿನಗಳ ಹಿಂದೆ ದೇಹತ್ಯಾಗ ಮಾಡಿದ್ದರು.
ಮಹಿಪಾಲಸಿಂಹ ಮಕರಾನ ಇವರು ‘ಆಗಸ್ಟ್ 31 ರಂದು ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವ ಆಂದೋಲನಗಳ ರೂಪುರೇಷೆಯನ್ನು ಮೆಹಂದಿಪುರ ಬಾಲಾಜಿ ದೇವಸ್ಥಾನದಲ್ಲಿ ನಿರ್ಧರಿಸಲಾಗುವುದು, ಅನಂತರ ರಾಜ್ಯದಲ್ಲಿನ ಇತರ ದೇವಸ್ಥಾನಗಳ ಸರಕಾರೀಕರಣವನ್ನು ರಹಿತಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ