ಇಸ್ಲಾಮಿಕ್ ಶಕ್ತಿಗಳ ವಿರುದ್ಧ ಹೋರಾಡಲು ಹಿಂದುಗಳು ಮತ್ತು ಕ್ರೈಸ್ತರು ಒಗ್ಗೂಡುವರು ! – ಡಾ. ಸುಬ್ರಹ್ಮಣ್ಯಂ ಸ್ವಾಮಿ

ಮುಸಲ್ಮಾನ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಿ ಹಿಂದೂಗಳನ್ನು ಹಿಂಸಿಸಿದರು. ಅದರ ನಂತರ, ‘ಕ್ರೈಸ್ತ’ ಬ್ರಿಟಿಷರು ಸಹ ಹಿಂದೂ ಧರ್ಮವನ್ನು ಕೊನೆಗೊಳಿಸಲು ಪ್ರಯತ್ನಿಸಿದರು. ಆದ್ದರಿಂದ, ಇಬ್ಬರೂ ಹಿಂದೂ ವಿರೋಧಿಗಳಾಗಿದ್ದಾರೆ, ಎಂಬುದನ್ನು ನೆನಪಿನಲ್ಲಿಡಿ !

ನವದೆಹಲಿ – ನನಗೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ದಿವಂಗತ ಪ್ರೊ. ಸ್ಯಾಮ್ಯುಯೆಲ್ ಹಂಟಿಂಗ್ಟನ್ ಇವರ ಒಳ್ಳೆಯ ಪರಿಚಯವಿದೆ. ಅವರು ೧೯೯೪ ರಲ್ಲಿ ವಿಭಿನ್ನ ಸಂಸ್ಕೃತಿಗಳ ನಡುವಿನ ಹೋರಾಟಗಳ ಕುರಿತು ಒಂದು ಉತ್ತಮವಾದ ಪುಸ್ತಕವನ್ನು ಬರೆದಿದ್ದರು. ಅದರಲ್ಲಿ ಅವರು, “ಇಸ್ಲಾಮಿಕ್ ಶಕ್ತಿಗಳ ವಿರುದ್ಧ ಹೋರಾಡಲು ಹಿಂದೂಗಳು ಮತ್ತು ಕ್ರೈಸ್ತರು ಒಟ್ಟಾಗುವರು” ಎಂದು ಹೇಳಿದ್ದರು. ಸದ್ಯದ ಪರಿಸ್ಥಿಯನ್ನು ಅವಲೋಕಿಸಿದಾಗ ನಾವು ಆ ಮಾರ್ಗದಲ್ಲಿ ಸಾಗುತ್ತಿದ್ದೇವೆ, ಎಂದು ಭಾಜಪದ ಹಿರಿಯ ಮುಖಂಡ ಮತ್ತು ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ ಟ್ವೀಟ್ ಮಾಡಿದ್ದಾರೆ. ತಾಲಿಬಾನ್ ಮತ್ತು ಇತರ ಜಿಹಾದಿ ಭಯೋತ್ಪಾದಕರ ವಿರುದ್ಧ ಹೋರಾಡಲು ಕ್ರೈಸ್ತ ಅಮೇರಿಕಾ ಮತ್ತು ಯುರೋಪಿಯನ್ ದೇಶಗಳು ಮತ್ತು ಹಿಂದೂ-ಬಹುಸಂಖ್ಯಾತ ಭಾರತ ಒಟ್ಟಾಗುತ್ತಿವೆ. ಆ ಹಿನ್ನೆಲೆಯಲ್ಲಿ, ಡಾ. ಸ್ವಾಮಿ ಈ ಟ್ವೀಟ್ ಮಾಡಿದ್ದಾರೆ.