ತಾಲಿಬಾನ್ ತನ್ನ ಆಶ್ವಾಸನೆಗಳಿಗೆ ಕಟಿಬದ್ಧವಾಗಿರುವುದು, ಎಂಬ ಅಪೇಕ್ಷೆ ! – ಶ್ರೀಲಂಕಾ

ತಾಲಿಬಾನ್‍ನಿಂದ ಇಂತಹದ್ದನ್ನು ನಿರೀಕ್ಷಿಸುವುದು ಮೂರ್ಖತನವಾಗಿದೆ, ಅಲ್ಲಿ ಪ್ರಸ್ತುತ ನಡೆಯುತ್ತಿರುವ ಕ್ರೂರತನವನ್ನು ನೋಡಿದ ನಂತರವಾದರೂ ಶ್ರೀಲಂಕಾಗೆ ಇದು ಗಮನಕ್ಕೆ ಬರಬೇಕಿತ್ತು ! ಪ್ರಪಂಚದ 1-2 ದೇಶಗಳನ್ನು ಹೊರತುಪಡಿಸಿ ಯಾರೂ ಇಂತಹ ಭರವಸೆಯನ್ನು ವ್ಯಕ್ತಪಡಿಸದಿರುವಾಗ ಶ್ರೀಲಂಕಾಗೆ ಮಾತ್ರ ತಾಲಿಬಾನ್‍ನ ಮೇಲೆ ಅಷ್ಟೊಂದು ವಿಶ್ವಾಸ ಬಂದಿರುವುದಕ್ಕೆ ಚೀನಾದ ಬೆಂಬಲ ಕಾರಣವೇ ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ ! – ಸಂಪಾದಕರು

ಕೊಲಂಬೊ (ಶ್ರೀಲಂಕಾ) – ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ತಾಲಿಬಾನ್ ಸಾಮಾನ್ಯ ಜನರಿಗೆ ಕ್ಷಮಾದಾನ, ಮಹಿಳಾ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ವಿದೇಶಿ ಪ್ರಜೆಗೆ ಹಾನಿ ಮಾಡದಿರುವುದು, ಎಂಬ ಆಶ್ವಾಸನೆಗಳನ್ನು ನೀಡಿದೆ ಎಂದು ನಮಗೆ ಸಂತೋಷವಾಗಿದೆ. ಅದು ಈ ಆಶ್ವಾಸನೆಗೆ ಕಟಿಬದ್ಧವಾಗಿರುವುದು, ಎಂಬ ನಂಬಿಕೆ ಇದೆ, ಎಂಬ ಶಬ್ದಗಳಲ್ಲಿ ಶ್ರೀಲಂಕಾವು ತಾಲಿಬಾನ್‍ನ ಅಧಿಕಾರವನ್ನು ಸ್ವಾಗತಿಸಿದೆ.

1. ಶ್ರೀಲಂಕಾವು, ಅಫ್ಘಾನಿಸ್ತಾನದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಅಮೆರಿಕಾ, ಬ್ರಿಟನ್, ಭಾರತ, ಪಾಕಿಸ್ತಾನ ಮತ್ತು ವಿಶ್ವಸಂಸ್ಥೆಯ ಸಹಾಯವನ್ನು ಕೋರಿದೆ.

2. ಶ್ರೀಲಂಕಾದ ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಈ ಹಿಂದೆಯೇ ಶ್ರೀಲಂಕಾಗೆ ಎಚ್ಚರಿಕೆಯನ್ನು ನೀಡುತ್ತಾ, ಅದು ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಬಾರದು ಎಂದು ಹೇಳಿದ್ದರು. ತಾಲಿಬಾನ್ ಸರಕಾರದ ಕಾಲದಲ್ಲಿ, ಅಫ್ಘಾನಿಸ್ತಾನವು ಜಿಹಾದಿ ಭಯೋತ್ಪಾದಕರ ಗುಂಪುಗಳಿಗೆ ಕೇಂದ್ರವಾಗಲಿದೆ ಎಂಬ ಭೀತಿ ಎಲ್ಲರಲ್ಲಿದೆ. ಅದಕ್ಕಾಗಿಯೇ ಶ್ರೀಲಂಕಾವು ಅವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಹೇಳಿದ್ದಾರೆ.