‘ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ; ಆದರೆ ಸರಕಾರವು ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಚಿಂತಿಸುತ್ತಿದೆ !’ (ಅಂತೆ) – ಅಸದುದ್ದೀನ್ ಓವೈಸಿ
ಓವೈಸಿಯವರಿಗೆ ಭಾರತೀಯ ಮಹಿಳೆಯರ ಸಂಕಷ್ಟದ ಬಗ್ಗೆ ತುಂಬಾ ಕಾಳಜಿ ಇದ್ದರೆ, ಅವರು ಇಲ್ಲಿಯವರೆಗೆ `ಲವ್ ಜಿಹಾದ್’ ವಿರುದ್ಧ ಏಕೆ ಧ್ವನಿ ಎತ್ತಲಿಲ್ಲ ? ಅವರ ಬಾಂಧವರಿಂದಾಗುವ ಪಿತೂರಿಯನ್ನು ತಡೆಯಲು ಏಕೆ ಪ್ರಯತ್ನಿಸಲಿಲ್ಲ ? ಇದಕ್ಕೆ ಓವೈಸಿ ಉತ್ತರಿಸುತ್ತಾರೆಯೇ ?- ಸಂಪಾದಕರು

ನವದೆಹಲಿ – ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿದ ನಂತರ ಅಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಇಡೀ ವಿಶ್ವವೇ ಚಿಂತೆಯಲ್ಲಿದೆ; ಆದರೆ ‘ಎಂಐಎಂ’ ನಾಯಕ ಮತ್ತು ಸಂಸದ ಅಸದುದ್ದೀನ್ ಓವೈಸಿಯು `ಭಾರತ ಸರಕಾರವು ತಾಲಿಬಾನ್ ಸರಕಾರದ ಅಫ್ಘಾನ್ ಜನರಿಗೆ ಸಹಾಯ ಮಾಡುವ ಬದಲು ಭಾರತದಲ್ಲಿ ಮಹಿಳೆಯರಿಗೆ ಸಹಾಯ ಮಾಡಬೇಕು’, ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು, `ಮುಸ್ಲಿಂ ಮಹಿಳೆಯರು ಮತ್ತು ಸಮುದಾಯದ ಸುರಕ್ಷತೆಗಾಗಿ ಅಸದುದ್ದೀನ್ ಓವೈಸಿ ಇವರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ ಕೊಡಬೇಕು’ ಎಂದು ಪ್ರತ್ಯುತ್ತರ ನೀಡಿದ್ದಾರೆ.
Union minister Shobha Karandlaje took a jibe at AIMIM chief Owaisi for his comment on crimes against women in India, saying that he should be sent to #Afghanistan.https://t.co/3Bc4gbS0FX
— Hindustan Times (@htTweets) August 20, 2021
ಓವೈಸಿ ಮಾತನ್ನು ಮುಂದುವರೆಸುತ್ತಾ, “ಒಂದು ವರದಿಯ ಪ್ರಕಾರ, ಭಾರತದಲ್ಲಿ ಒಂಬತ್ತು ಹುಡುಗಿಯರಲ್ಲಿ ಒಬ್ಬಳದ್ದು ಆಕೆ 5 ವರ್ಷದವಳಿದ್ದಾಗ ಮೃತ್ಯುವಾಗುತ್ತದೆ. ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ; ಆದರೆ ಅವರು(ಕೇಂದ್ರ ಸರಕಾರ) ಅಫ್ಘಾನಿಸ್ತಾನದ ಮಹಿಳೆಯರ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನವು ತಾಲಿಬಾನ್ನ ಸಂಪೂರ್ಣ ನಿಯಂತ್ರಣದಲ್ಲಿದೆ. ಎಲ್ಲಾ ಅಂತಾರಾಷ್ಟ್ರೀಯ ಭದ್ರತಾ ತಜ್ಞರಿಗೆ ತಾಲಿಬಾನ್ನೊಂದಿಗೆ ಚರ್ಚೆ ನಡೆಸಬೇಕು ಎಂದು ಅನಿಸುತ್ತದೆ; ಆದರೆ ನಮ್ಮಿಂದ ಅವರೊಂದಿಗೆ ಸಂವಾದವನ್ನು ಸಾಧಿಸುತ್ತಿರುವುದು ಕಂಡುಬರುತ್ತಿಲ್ಲ.” ಎಂದು ಹೇಳಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari