520 ಕಾಶ್ಮೀರಿ ಹಿಂದೂಗಳು ಕಾಶ್ಮೀರ ಕಣಿವೆಗೆ ಮರಳಿದರು !
ಕೇವಲ 9 ಕಾಶ್ಮೀರಿ ಹಿಂದೂಗಳಿಗೆ ಆಸ್ತಿ ದೊರಕಿತು, ಈ ಪರಿಸ್ಥಿತಿ ಖೇದಜನಕವಾಗಿದೆ. ಇದರರ್ಥ ಕಾಶ್ಮೀರದಲ್ಲಿ ಹಿಂದೂಗಳಿಗೆ ಸುರಕ್ಷಿತ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ. ಅಲ್ಲಿನ ಮತಾಂಧರು ಮತ್ತು ಜಿಹಾದಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದರೆ ಮಾತ್ರ ಹಿಂದೂಗಳಿಗೆ ಸುರಕ್ಷಿತವೆನಿಸುವುದು !

ನವ ದೆಹಲಿ : ಕಾಶ್ಮೀರದಲ್ಲಿ ಸ್ಥಳಾಂತರಗೊಂಡ ಹಿಂದೂಗಳ ಆಸ್ತಿಯನ್ನು ಮರಳಿ ಪಡೆಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಅವರಲ್ಲಿ ಕೆಲವರಿಗೆ ಆಸ್ತಿಯನ್ನು ಹಿಂತಿರುಗಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 9 ಕಾಶ್ಮೀರಿ ಹಿಂದೂಗಳಿಗೆ ಅವರ ಆಸ್ತಿಯನ್ನು ಮರಳಿ ನೀಡಲಾಗಿದೆ ಎಂದು ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ತಿಳಿಸಿದೆ.
1. ಕೇಂದ್ರ ಗೃಹರಾಜ್ಯ ಸಚಿವ ನಿತ್ಯಾನಂದ ರಾಯ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, ಆಯಾ ಜಿಲ್ಲಾ ದಂಡಾಧಿಕಾರಿಗಳು ಕಾಶ್ಮೀರದ ಎಲ್ಲ ಜಿಲ್ಲೆಗಳಲ್ಲಿ ಸ್ಥಳಾಂತರಗೊಂಡ ಕಾಶ್ಮೀರಿಗಳ ಆಸ್ತಿಗಳ ಕಾನೂನಿನ ಸಂರಕ್ಷಕರಾಗಿದ್ದಾರೆ. ಯಾರಾದರೂ ಈ ಆಸ್ತಿಯನ್ನು ಅತಿಕ್ರಮಿಸಿಕೊಂಡಿದ್ದರೆ, ಅವರ ವಿರುದ್ಧ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಕಾಶ್ಮೀರಿ ಹಿಂದೂಗಳು ತಮ್ಮ ಭೂಮಿಯನ್ನು ಹಿಂಪಡೆಯಲು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಬಹುದು.
2. ಜಮ್ಮು – ಕಾಶ್ಮೀರ ಆಡಳಿತವು ನೀಡಿದ ಮಾಹಿತಿಗನುಸಾರ, ಕಲಮ್ 370 ರದ್ದಾದ ನಂತರ ಒಟ್ಟು 520 ಸ್ಥಳಾಂತರಗೊಂಡಿದ್ದ ಜನರು ಕಾಶ್ಮೀರಕ್ಕೆ ಮರಳಿದ್ದಾರೆ. ಅಲ್ಲಿ ಅವರಿಗೆ `ಪ್ರಧಾನಮಂತ್ರಿ ವಿಕಾಸ ಪ್ಯಾಕೇಜ್ –2015′ ಅಡಿಯಲ್ಲಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತದೆ.
Nine J&K properties vacated by Hindus restored: Government in Rajya Sabha https://t.co/77ioQFAmLX pic.twitter.com/GbcCbu1RoF
— The Times Of India (@timesofindia) August 12, 2021
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !