
ಈ ವ್ಯಕ್ತಿತ್ವವನ್ನು ಪಡೆದುಕೊಂಡಿರುವ ಯುವಕನು ರಾಜಕಾರಣದಲ್ಲಿ ಸೇರಿಕೊಂಡರೂ ಸ್ವಾರ್ಥಿಯಾಗುವುದಿಲ್ಲ. ಅವನು ಸಮಾಜಕಲ್ಯಾಣದಲ್ಲಿ ಸೇರಿಕೊಂಡರೂ ಢೋಂಗಿಯಾಗುವುದಿಲ್ಲ. ಅವನ ಕಾರ್ಯಕ್ರಮಗಳ ಗಾಳಿಗೋಪುರಗಳಾಗುವುದಿಲ್ಲ. ನಿಜವಾದ ಕಳಕಳಿಯಿಂದ ಮಾಡಿದ ಮಾನವನ ಸೇವೆಯಿಂದ ಇಂತಹ ಉದಾತ್ತ ಸ್ವರೂಪ ಅವನಿಗೆ ಪ್ರಾಪ್ತವಾಗಲು ಸಮಯ ತಗಲಲಾರದು. ಯಾವ ವ್ಯಕ್ತಿಯು ಈ ವ್ಯಕ್ತಿತ್ವವನ್ನು ಪಡೆದುಕೊಂಡಿದ್ದಾನೆಯೋ, ಆ ಸರ್ವಸಾಮಾನ್ಯ ಯುವಕನೂ ತನ್ನ ಕ್ಷಮತೆಗನುಸಾರ ಜೀವನದ ವಾಸ್ತವಿಕತೆಯನ್ನು ಎದುರಿಸ ಬಲ್ಲನು. ಅವನು ತನ್ನ ಮಹತ್ವ, ಕ್ಷಮತೆ ಮತ್ತು ಮಿತಿಗಳನ್ನು ತಿಳಿದು ಜೀವನವನ್ನು ಹೆಚ್ಚು ಸಮರ್ಪಕವಾಗಿ ನೋಡಬಲ್ಲನು. – ಶ್ರೀ. ರವೀಂದ್ರ ಪರೆತಕರ (ಕೃಪೆ : ತ್ರೈಮಾಸಿಕ ಪ್ರಜ್ಞಾಲೋಕ)
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಆಪತ್ಕಾಲದ ಸ್ಥಿತಿಯಲ್ಲಿ ‘ನಾಗರಪಂಚಮಿ ಪೂಜೆಯನ್ನು ಹೇಗೆ ಮಾಡಬೇಕು ?
ಪ್ರಭು ಶ್ರೀರಾಮನು ಮಾಂಸ ಸೇವಿಸಿದನು ಎಂಬುದು ಸಂಪೂರ್ಣ ತಪ್ಪು ಅಪಪ್ರಚಾರ ! – ಮಹಂತ ಪವನಕುಮಾರದಾಸ ಶಾಸ್ತ್ರೀಜಿ, ಮಹಾಮಂತ್ರಿ, ಅಯೋಧ್ಯಾ ಸಂತ ಸಮಿತಿ
ರಾಜಕಾರಣದಲ್ಲಿ ನಿವೃತ್ತಿಯ ವಯಸ್ಸೆಷ್ಟು ?