ಪುಣೆ – ಪುಣೆ ಶ್ರಮಿಕ ಪತ್ರಕಾರ ಸಂಘದಿಂದ ಆಗಸ್ಟ ೪ ರಂದು ಆಯೋಜಿಸಲಾಗಿದ್ದ ಸಂದರ್ಶನದಲ್ಲಿ ಶಿವಶಾಹೀರ ಬಾಬಾಸಾಹೇಬ ಪುರಂದರೆ ಇವರು ಮುಂದಿನಂತೆ ಹೇಳಿದರು. ನಾವು ಇತಿಹಾಸದೊಂದಿಗೆ ಬದುಕುತ್ತಿರುತ್ತೇವೆ. ಆದುದರಿಂದ ಇತಿಹಾಸವು ಎಂದಿಗೂ ಹಳೆಯದಾಗುವುದಿಲ್ಲ, ಅದು ಯಾವಾಗಲೂ ಹಸಿರಾಗಿರುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಮೊದಲು ರಾಷ್ಟ್ರೀಯ ವಿಚಾರವನ್ನು ಮಂಡಿಸಿದರು. ದೇಶಕ್ಕೆ ಇಂದು ರಾಷ್ಟ್ರೀಯ ವಿಚಾರಗಳ ಅತ್ಯಂತ ಅವಶ್ಯಕತೆ ಇದೆ. ಛತ್ರಪತಿ ಶಿವಾಜಿ ಮಹಾರಾಜರ ರಾಷ್ಟ್ರೀಯತ್ವವು ಶಾಶ್ವತವಾಗಿರಬೇಕು.
ಶಿವಶಾಹೀರ ಬಾಬಾಸಾಹೇಬ ಪುರಂದರೆಯವರು ಮಾತನಾಡುವಾಗ, ಸದ್ಯದ ಕಾಲದಲ್ಲಿ “ ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯದ ಸಂದರ್ಭದ ಎಲ್ಲ ಲೇಖನವನ್ನು ವರ್ತಮಾನಕಾಲದಲ್ಲಿ ಉಪಯೋಗಿಸಬೇಕು. ಛತ್ರಪತಿ ಶಿವಾಜಿ ಮಹಾರಾಜರ ಸಂದರ್ಭದಲ್ಲಿ ವಿವಿಧ ಸ್ತರದಲ್ಲಿ ಸಂಶೋಧನೆ ನಡೆಯುತ್ತಿದೆ. ನೂತನ ಲೇಖಕರು ಸಂಶೋಧನೆಗಾಗಿ ಅಭ್ಯಾಸ ಮಹತ್ವದ್ದಾಗಿರುತ್ತದೆ ಎಂಬ ಅರಿವನ್ನು ಇಟ್ಟುಕೊಳ್ಳಬೇಕು. ಶಿವಸೃಷ್ಟಿಯಿಂದ ಮುಂಬರುವ ಪೀಳಿಗೆಗೆ ಛತ್ರಪತಿ ಶಿವಾಜಿಯವರ ಬಗ್ಗೆ ತಿಳಿದಿರಬೇಕು, ಎಂಬ ಉದ್ದೇಶದಿಂದ ಶಿವಸೃಷ್ಟಿಯು ಒಂದು ಮಹತ್ವದ ಹಂತವಾಗಿದೆ. ನಮ್ಮಲ್ಲಿ (ಮಹಾರಾಷ್ಟ್ರದಲ್ಲಿ) ಬೆಟ್ಟ, ಕಡಲುತೀರ, ಸಾಗರ, ಕೋಟೆಗಳು ಹೀಗೆ ೩೫೨ ಕೋಟೆಗಳಿವೆ. ಅದರಲ್ಲಿ ೨೯೨ ಕೋಟೆಗಳನ್ನು ನಾನು ನೋಡಿದ್ದೇನೆ. ಇಂದು ಕೋಟೆಗಳ ಸ್ಥಿತಿಯು ಹದಗೆಟ್ಟಿದೆ; ಆದರೆ ಅಭಿವೃದ್ಧಿಗಾಗಿ ಏನು ಮಾಡಲು ಸಾಧ್ಯವಿದೆ ಅದನ್ನು ಮಾಡಬೇಕು. ಶಿವಕಾರ್ಯಕ್ಕಾಗಿ ನನಗೆ ಇನ್ನೂ ಕೆಲ ವರ್ಷಗಳ ಕಾಲ ಬದುಕಲಿಕ್ಕಿದೆ. ನನ್ನ ತಾಯಿ ಎಂದರೆ ಸಂಸ್ಕಾರಗಳ ಗೂಡಾಗಿದ್ದಳು. ಆದ್ದರಿಂದ ನನ್ನ ತಂದೆ- ತಾಯಿ ಮತ್ತು ನನ್ನನ್ನು ಪ್ರೀತಿಸುವ ಜನರನ್ನು ನಾನು ಎಂದಿಗೂ ಮರೆಯಲಾರೆನು. ಎಂದು ಹೇಳಿದರು.

‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !