ನನ್ ಅಭಯಾ ಇವರ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಪಾದ್ರಿ ಮತ್ತು ನನ್‌ಗೆ ಪೆರೋಲ್ !

ಕೇರಳದ ಉಚ್ಚ ನ್ಯಾಯಾಲಯದಿಂದ ರಾಜ್ಯದ ಕಮ್ಯುನಿಸ್ಟ ಸರಕಾರಕ್ಕೆ ಸ್ಪಷ್ಟೀಕರಣ ನೀಡುವಂತೆ ಆದೇಶ

  • ಕೇರಳದಲ್ಲಿ ಕಮ್ಯುನಿಷ್ಟ ಸರಕಾರ?? ಕ್ರೈಸ್ತರ ಕೈಗೊಂಬೆಯಾಗಿದ್ದರಿಂದ ತನ್ನ ಅಧಿಕಾರವನ್ನು ಉಪಯೋಗಿಸಿ ಕೊಲೆಗಾರರಿಗೆ ಸಹಾಯ ಮಾಡಲು ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಈ ಬಗ್ಗೆ ಕಪಟಿ ಜಾತ್ಯತೀತವಾದಿಗಳು ಹಾಗೂ ಕಾನೂನು ಪ್ರೇಮಿಗಳು ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! 
  • ಸುಳ್ಳು ಅಪರಾಧಕ್ಕೆ ಬಂಧಿಸಲಾಗಿರುವ ಅಮಾಯಕ ಹಿಂದುತ್ವನಿಷ್ಠರಿಗೆ ಕಮ್ಯುನಿಸ್ಟ ಸರಕಾರವು ಈ ರೀತಿಯ ಮನ್ನಾ ಮಾಡುತ್ತಿದ್ದರೇನು ?

ತಿರುವನಂತಪುರಮ್ (ಕೇರಳ) – ರಾಜ್ಯದ ನನ್ ಅಭಯಾ ಹತ್ಯೆಯ ಆರೋಪಿಗಳಿಗೆ ‘ಪೆರೋಲ್’(ಒಂದು ನಿರ್ದಿಷ್ಟ ಅವಧಿಗೆ ಕೈದಿಗೆ ಷರತ್ತುಬದ್ಧ ಬಿಡುಗಡೆ) ಮೇಲೆ ಬಿಡುಗಡೆ ಮಾಡಿದ ಬಗ್ಗೆ ಕೇರಳದ ಉಚ್ಚ ನ್ಯಾಯಾಲಯವು ರಾಜ್ಯದ ಕಮ್ಯುನಿಸ್ಟ ಸರಕಾರದ ಬಳಿ ಸ್ಪಷ್ಟೀಕರಣವನ್ನು ಕೇಳಿದೆ. ಈ ಅಪರಾಧಿಗಳಿಗೆ ನೀಡಿರುವ ಪೆರೋಲಾನ್ನು ಕೂಡಲೇ ಹಿಂಪಡೆಯುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ಸ್ಪಷ್ಟೀಕರಣವನ್ನು ಕೇಳಿದೆ.

ಮಾರ್ಚ್ ೨೭ ೧೯೯೨ ರಂದು ರಾಜ್ಯದ ಕೊಟ್ಟಾಯಮ್‌ನಲ್ಲಿನ ಸೆಂಟ್ ಪಾಯಸ ಕಾನ್ವೆಂಟ್‌ನಲ್ಲಿದ್ದ ನನ್ ಅಭಯಾ ಇವರ ಶವವು ಒಂದು ಬಾವಿಯಲ್ಲಿ ಪತ್ತೆಯಾಗಿತ್ತು. ಅವರ ಸಾವಿನ ೨೮ ವರ್ಷಗಳ ನಂತರ ಸಿಬಿಐಯ ನ್ಯಾಯಾಲಯವು ಡಿಸೆಂಬರ ೨೩, ೨೦೨೦ ರಂದು ಪಾದ್ರಿ ಥಾಮಸ್ ಮತ್ತು ನನ್ ಸೇಫಿ ಇವರನ್ನು ಅಪರಾದಿಗಳೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ನನ್ ಅಭಯಾಳು ಪಾದ್ರಿ ಥಾಮಸ್ ಹಾಗೂ ನನ್ ಸೇಫಿಯನ್ನು ಆಕ್ಷ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ್ದರಿಂದ ಅವರಿಬ್ಬರು ಆಕೆಯ ಹತ್ಯೆ ಮಾಡಿದ್ದರು. (ಇದರಿಂದ ಪಾದ್ರಿ ಮತ್ತು ನನ್ ಇವರ ಅಪರಾಧೀ ಮಾನಸಿಕತೆಯು ಕಂಡು ಬರುತ್ತದೆ ! – ಸಂಪಾದಕರು)