ಕೊಲ್ಕತ್ತಾದಲ್ಲಿ ಮತಾಂಧರಿಂದ ಮಾರಕಾಸ್ತ್ರಗಳಿಂದ ಹಿಂದೂ ಮಾಲಿಕ ಮತ್ತು ಆತನ ಚಾಲಕನ ಮೇಲೆ ದಾಳಿ !

ಮಾಲಿಕರು ಕಡಿಮೆ ಸಂಬಳ ಕೊಟ್ಟಿದ್ದಾರೆಂದು ಆರೋಪ !

ಕೊಲ್ಕತ್ತಾ – ಕಹಾರ ಮೊಲ್ಲಾ ಹೆಸರಿನ ಓರ್ವ ಮತಾಂಧನು ತನ್ನ ಹಿಂದೂ ಮಾಲಿಕನ ಮತ್ತು ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಇಲ್ಲಿಯ ಕಸಬಾ ಪ್ರದೇಶದಲ್ಲಿ ಇತ್ತಿಚೆಗೆ ನಡೆದಿದೆ. ಮೊಲ್ಲಾನು ಬಟ್ಟೆಯನ್ನು ತಯಾರಿಸುವ ಕಾರಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಾಲಿಕ ತುಹಿನ್ ಕುಮಾರ್ ಡೆಯು ಕಡಿಮೆ ಸಂಬಳ ನೀಡಿರುವ ಕೋಪವನ್ನು ಮನಸ್ಸಿನಲ್ಲಿಟ್ಟುಕೊಂಡು ಆತ ಡೆ ಮತ್ತು ಚಾಲಕ ಶಾಶ್ವತ ಚಕ್ರವರ್ತಿಯ ಮೇಲೆ ಮಾರಕಾಸ್ತ್ರಗಳಿಂದ ಆಕ್ರಮಣ ಮಾಡಿದನು. ಈ ಹಲ್ಲೆಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ ಹಾಗೂ ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಮೊಲ್ಲಾನನ್ನು ಬಂಧಿಸಿದ್ದಾರೆ.

ಡೇಯವರು ನೀಡಿದ ಮಾಹಿತಿಯನುಸಾರ ಮೊಲ್ಲಾ ಇವನಿಗೆ ಸಂಬಳವನ್ನು ಕೊಟ್ಟನಂತರ ಸಂಬಳ ಕಡಿಮೆ ಕೊಡಲಾಗಿದೆ ಎಂದು ವಾದ ಮಾಡಲಾರಂಭಿಸಿದನು. ನಂತರ ಆತ ಕಾರಖಾನೆಯಲ್ಲೇ ಸಂಜೆಯ ನಮಾಜ ಪಠಣ ಮಾಡಿದನು ಮತ್ತು ಕೂಡಲೇ ಬಂದು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ.