|
* ಪ್ರಜಾಪ್ರಭುತ್ವದಲ್ಲಿ ಈ ರೀತಿಯ ತೆರಿಗೆದಾರರ ಹಣವನ್ನು ಕೇವಲ ಜಾತಿಯ ಆಧಾರದಲ್ಲಿ ಹಂಚಲು ಸರಕಾರಕ್ಕೆ ಯಾವ ಅಧಿಕಾರ ಇದೆ ? ಒಂದುವೇಳೆ ಈ ಜಾತಿಯಲ್ಲಿ ಯಾರಾದರು ಆರ್ಥಿಕವಾಗಿ ಸಧೃಢವಾಗಿದ್ದರೆ, ಅವರಿಗೂ ಹಣವನ್ನು ನೀಡುವರೇ ? * ಸರಕಾರದ ಬಳಿ ಹಣ ಹೆಚ್ಚಿದ್ದರೆ, ಅವರು ನಾಗರಿಕರಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ನೀಡಬೇಕು. ದೇಶ ಆರೋಗ್ಯ ವ್ಯವಸ್ಥೆ ಎಷ್ಟು ಕುಸಿದಿದೆ, ಎಂಬುದು ಕೊರೊನಾದ ಸಮಯದಲ್ಲಿ ಜಗತ್ತಿನೆದುರಿಗೆ ಬಂದಿದೆ. ಅದನ್ನು ಸುಧಾರಿಸಲು ಸರಕಾರ ಹಣವನ್ನು ಖರ್ಚು ಮಾಡಬೇಕು ! * ಯಾವುದಾದರೊಂದು ಸಮಾಜಕ್ಕೆ ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಾಗಲು ಹಣ ನೀಡುವುದಕ್ಕಿಂತ ಅವರಿಗೆ ಉದ್ಯೋಗವನ್ನು ಏಕೆ ನೀಡುವುದಿಲ್ಲ ? ಕಡಿಮೆ ಬಡ್ಡಿಯ ದರದಲ್ಲಿ ಏಕೆ ಸಾಲ ನೀಡುವುದಿಲ್ಲ ? |

ಭಾಗ್ಯನಗರ (ತೆಲಂಗಾಣಾ) – ರಾಜ್ಯ ಸರಕಾರವು ರಾಜ್ಯದ ಪ್ರತಿಯೊಂದು ದಲಿತ ಕುಟುಂಬದ ಓರ್ವ ಸದಸ್ಯರ ಬ್ಯಾಂಕಿನ ಖಾತೆಯಲ್ಲಿ ೧೦ ಲಕ್ಷ ರೂಪಾಯಿ ಜಮೆ ಮಾಡಲಾಗುವುದು, ಎಂದು ತೆಲಂಗಾಣಾದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಘೋಷಣೆ ಮಾಡಿದರು. ಈ ಯೋಜನೆಗಾಗಿ ಸಧ್ಯ ೧ ಸಾವಿರದ ೨೦೦ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಗೆ ‘ಮುಖ್ಯಮಂತ್ರಿ ದಲಿತ ಸಬಲೀಕರಣ ಕಾರ್ಯಕ್ರಮ’ ಎಂದು ಹೆಸರಿಡಲಾಗಿದೆ. ರಾಜ್ಯದ ದಲಿತರ ಆರ್ಥಿಕ ಸ್ಥಿತಿ ಸಧೃಢವಾಗಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ ೧೧ ಸಾವಿರದ ೯೦೦ ಕುಟುಂಬಗಳನ್ನು ಸಮಾವೇಶಗೊಳಿಸಲಾಗಿದೆ. ರಾಜ್ಯದ ಪ್ರತಿಯೊಂದು ಮತದಾನ ಕ್ಷೇತ್ರದಲ್ಲಿಯ ೧೦೦ ಕುಟುಂಬವನ್ನು ಮೊದಲನೇಯ ಹಂತದಲ್ಲಿ ಸೇರಿಸಲಾಗಿದೆ. ತೆಲಂಗಾಣಾದಲ್ಲಿ ವಿಧಾನಸಭೆಯ ೧೧೯ ಮತದಾನ ಕ್ಷೇತ್ರಗಳಿವೆ.
According to the Telangana Chief Minister’s office, in the first phase, the assistance would be given to 100 families selected from each of the 119 Assembly Constituencieshttps://t.co/AkXkQwqtFF
— India TV (@indiatvnews) June 28, 2021
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath