ಫೇಸ್ಬುಕ್ನಿಂದ ಹಿಂದುತ್ವನಿಷ್ಠ ಮತ್ತು ಅವರ ಸಂಘಟನೆಗಳ ಪುಟದ ಮೇಲೆ ಹೇರಿದ್ದ ನಿರ್ಬಂಧವನ್ನು ರಾಷ್ಟ್ರ ಮತ್ತು ಧರ್ಮಪ್ರೇಮಿಗಳಿಂದ ಟ್ವಿಟರ್ ಮೂಲಕ ವಿರೋಧ !
ಮುಂಬಯಿ – ಕಳೆದ ಕೆಲವು ತಿಂಗಳುಗಳಲ್ಲಿ ಫೇಸ್ಬುಕ್ ಹಿಂದುತ್ವದ ಪ್ರಚಾರ ಮಾಡುವುದನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ. ಈವರೆಗೆ ಫೇಸ್ಬುಕ್ ಇದು ಸನಾತನ ಸಂಸ್ಥೆ, ಸುದರ್ಶನ್ ಟಿವಿ, ಸುರೇಶ ಚವ್ಹಾಣಕೆ, ಬಿಜೆಪಿ ಶಾಸಕ ಟಿ. ರಾಜಾಸಿಂಹ ಹೀಗೆ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ನಾಯಕರ ಪುಟಗಳನ್ನು ನಿರ್ಬಂಧಿಸಿದೆ. ಈಗ ಸನಾತನ ಪ್ರಭಾತ, ಸನಾತನ ಶಾಪ್ ಮತ್ತು ಹಿಂದೂ ಜನಜಾಗೃತಿ ಸಮಿತಿ ನಡೆಸುತ್ತಿರುವ ರಾಷ್ಟ್ರ ಮತ್ತು ಧರ್ಮದ ಪುಟಗಳನ್ನು ಸಹ ಬಂದ್ ಮಾಡಲಾಗಿದೆ. ಮತ್ತೊಂದೆಡೆ, ಜಿಹಾದ್ ಮತ್ತು ಸಮಾಜದಲ್ಲಿ ದ್ವೇಷವನ್ನು ಹರಡುವ ಡಾ. ಝಾಕಿರ ನಾಯಿಕ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ರಝಾ ಅಕಾಡೆಮಿ ಇತ್ಯಾದಿಗಳ ಪುಟಗಳು ಮುಂದುವರೆಸಿದೆ. ಇದರಿಂದ ಫೇಸ್ಬುಕ್ನ ಹಿಂದೂದ್ವೇಷ ತೋರಿಸುತ್ತದೆ. ಆದ್ದರಿಂದಲೇ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಂದ ಟ್ವಿಟರ್ನಲ್ಲಿ #Facebook_Targets_HJS ಎಂಬ ಹ್ಯಾಶ್ಟ್ಯಾಗ್ ಅನ್ನು ಟ್ರೆಂಡ್ ಮಾಡುವ ಮೂಲಕ ಇದನ್ನು ವಿರೋಧಿಸಿದರು. ಈ ಟ್ರೆಂಡ್ ಅಲ್ಪಾವಧಿಯಲ್ಲೇ ರಾಷ್ಟ್ರೀಯ ಟ್ರೆಂಡ್ನಲ್ಲಿ ಮೂರನೇ ಸ್ಥಾನದಲ್ಲಿತ್ತು. ಈ ಮೂಲಕ ಧರ್ಮಾಭಿಮಾನಿಗಳು ಸಂಘಟನೆಗಳ ಮತ್ತು ನಾಯಕರ ಪುಟಗಳ ಮೇಲಿನ ನಿಷೇಧವನ್ನು ಫೇಸ್ಬುಕ್ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಕೊನೆಯ ಸುದ್ದಿ ಹೊರಬರುವ ಹೊತ್ತಿಗೆ, ಈ ಟ್ರೆಂಡ್ನಲ್ಲಿ ೪೫೦೦೦ ಕ್ಕೂ ಹೆಚ್ಚು ಟ್ವೀಟ್ಗಳು ಬಂದಿದ್ದವು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ಅನ್ಯಾಯದ ವಿರುದ್ಧ ಆನ್ಲೈನ್ ಅಭಿಯಾನವನ್ನೂ ನಡೆಸುತ್ತಿದೆ.

ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !