(‘ಕಟ್ಟೂನ್’ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಜಾನಪದ ಸಂಪ್ರದಾಯವಾಗಿದೆ, ಇದರಲ್ಲಿ ಪುರುಷರು ವಿವಿಧ ವೇಷಭೂಷಣಗಳನ್ನು ಧರಿಸುತ್ತಾರೆ.)

ಬೆಳ್ತಂಗಡಿ (ದಕ್ಷಿಣ ಕನ್ನಡ) – ಬೆಳ್ತಂಗಡಿ ತಾಲೂಕಿನ ಪೇರಾಡಿ ಗ್ರಾಮದಲ್ಲಿ ಪುರುಷರ ‘ಕಟ್ಟೂನ್’ ಎಂಬ ಜಾನಪದ ಉತ್ಸವದಲ್ಲಿ ಮುಸ್ಲಿಂ ವೇಷ ಧರಿಸಿ ಇಸ್ಲಾಂ ಧರ್ಮ, ಮಹಮ್ಮದ್ ಪೈಗಂಬರ್ ಮತ್ತು ಪವಿತ್ರ ಅಜಾನ್ಗೆ ಅವಮಾನಿಸಲಾಗಿದೆ ಎಂದು ಮತಾಂಧ ಮುಸಲ್ಮಾನರು ಆರೋಪಿಸಿದ್ದಾರೆ. ಏಪ್ರಿಲ್ ೧೪ ರಂದು ರಾತ್ರಿ ೧೧ ರಿಂದ ೧೨ ಗಂಟೆಯ ನಡುವೆ ಪುರುಷರ ‘ಕಟ್ಟೂನ್’ ಜಾನಪದ ಸಂಪ್ರದಾಯದಲ್ಲಿ ಇಸ್ಲಾಂನ ವೇಷ ಧರಿಸಿ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷದ ಭಾವನೆ ಹುಟ್ಟುಹಾಕುವ ಉದ್ದೇಶದಿಂದ ಈ ಕೃತ್ಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಪಡಂಗಡಿ ಗ್ರಾಮದ ನಿವಾಸಿ ಮಹಮ್ಮದ್ ರಫೀಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ೧೭ ಹಿಂದೂಗಳ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ದೇವರುಗಳನ್ನು ಅವಮಾನಿಸುವ ಮತಾಂಧರ ಮೇಲೆ ಈ ರೀತಿ ಪೊಲೀಸ್ ಪ್ರಕರಣ ದಾಖಲಿಸುತ್ತಾರೆಯೇ? |