ಚಿತ್ರ ಔರಂಗಜೇಬನದ್ದಲ್ಲ, ಬಹದ್ದೂರ ಶಾ ಜಫರ್ ಅವರದ್ದು ಎಂದು ರೈಲ್ವೆಯ ದಾವೆ

ಗಾಜಿಯಾಬಾದ (ಉತ್ತರ ಪ್ರದೇಶ) – ಗಾಜಿಯಾಬಾದ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 4 ರಲ್ಲಿರುವ ಔರಂಗಜೇಬನ ಚಿತ್ರಕ್ಕೆ ‘ಹಿಂದೂ ರಕ್ಷಾ ದಳ’ ಎಂಬ ಹಿಂದೂ ಸಂಘಟನೆಯು ಕಪ್ಪು ಬಣ್ಣ ಬಳಿದಿದೆ. ‘ಸರಕಾರಿ ಕಟ್ಟಡದ ಮೇಲೆ ಮೊಘಲ್ ಆಕ್ರಮಣಕಾರನ ಚಿತ್ರವನ್ನು ಅಳಿಸಲು ರೈಲ್ವೆ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು’ ಎಂದು ಈ ಹಿಂದೂ ಸಂಘಟನೆಯ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಗಾಜಿಯಾಬಾದ ರೈಲ್ವೆ ಅಧಿಕಾರಿಗಳು, ಈ ಚಿತ್ರ ಔರಂಗಜೇಬನದ್ದಲ್ಲ, ಬದಲಾಗಿ ಕೊನೆಯ ಮೊಘಲ್ ದೊರೆ ಮತ್ತು 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಬಹದ್ದೂರ್ ಶಾ ಜಫರ್ ಅವರದ್ದು ಎಂದು ವಾದಿಸಿದ್ದಾರೆ.
🚨 #GhaziabadRailwayStation : Hindu group blackens portrait at Ghaziabad station, claiming it was Aurangzeb!
🚆 Railways clarify: “It’s not Aurangzeb, but Bahadur Shah Zafar.”
🤔 If it was Bahadur Shah Zafar, then why wasn’t his name mentioned below the portrait? The question… pic.twitter.com/pPP4rBXnSw
— Sanatan Prabhat (@SanatanPrabhat) April 18, 2025
ಹಿಂದೂ ರಕ್ಷಾ ದಳಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗಾಜಿಯಾಬಾದ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಅವರು ಘೋಷಣೆಗಳನ್ನು ಕೂಗುತ್ತಾ ಈ ಚಿತ್ರಕ್ಕೆ ಕಪ್ಪು ಬಣ್ಣ ಬಳಿದರು. ರೈಲ್ವೆ ಸರಕಾರಿ ಆಸ್ತಿಯಾಗಿದೆ. ಅಂತಹ ಚಿತ್ರಕಲೆಗಳನ್ನು ಅಲ್ಲಿ ಸಹಿಸಲಾಗುವುದಿಲ್ಲ ಎಂದು ಈ ಸಂಘಟನೆ ಹೇಳಿದೆ. ರೈಲ್ವೆ ಅಧಿಕಾರಿಗಳಿಗೆ ಸ್ವತಃ ಆ ಚಿತ್ರವನ್ನು ಅಳಿಸುವಂತೆ ತಿಳಿಸಲಾಗಿದೆ. ಔರಂಗಜೇಬನು ಮುಸ್ಲಿಂ ಆಕ್ರಮಣಕಾರನಾಗಿದ್ದನು.
ಸಂಪಾದಕೀಯ ನಿಲುವುಒಂದು ವೇಳೆ ಇದು ಔರಂಗಜೇಬನ ಚಿತ್ರವಲ್ಲ, ಬಹದ್ದೂರ ಶಾ ಜಫರ್ ಅವರದ್ದಾಗಿದ್ದರೆ, ರೈಲ್ವೆ ಆಡಳಿತವು ಚಿತ್ರದ ಕೆಳಗೆ ಅವರ ಹೆಸರನ್ನು ಏಕೆ ಬರೆದಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ! |