ಕೇಂದ್ರ ಸಚಿವ ಮತ್ತು ಬಂಗಾಳದ ಭಾಜಪ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ ಅವರ ಹೇಳಿಕೆ

ಕೋಲಕಾತಾ (ಬಂಗಾಳ) – ಮುರ್ಶಿದಾಬಾದನ ಮಸೀದಿಯ ಧ್ವನಿವರ್ಧಕಗಳಿಂದ ಗಲಭೆಗೆ ಕರೆ ನೀಡಿದ್ದು ಎಂದು ಕೇಂದ್ರ ಸಚಿವ ಮತ್ತು ಬಂಗಾಳದ ಭಾಜಪ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ ಅವರು ಗಲಭೆ ಸಂತ್ರಸ್ತರ ಉಲ್ಲೇಖದೊಂದಿಗೆ ಆರೋಪಿಸಿದ್ದಾರೆ. ‘ರಾಜ್ಯದಲ್ಲಿ ಭಾಜಪ ಅಧಿಕಾರಕ್ಕೆ ಬಂದರೆ, ಇಂತಹ ಗಲಭೆಗಳಿಗಾಗಿ ಧಾರ್ಮಿಕ ಸ್ಥಳವನ್ನು ಬಳಸುವುದನ್ನು ನಿಷೇಧಿಸಲಾಗುವುದು’ ಎಂದು ಮಜುಂದಾರ ಹೇಳಿದರು. ಬಂಗಾಳದ ಪೊಲೀಸ ಮಹಾನಿರ್ದೇಶಕರನ್ನು ಭೇಟಿಯಾದ ನಂತರ ಮಜುಂದಾರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಮುರ್ಶಿದಾಬಾದನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಕ್ರಿಯ!
ಮುರ್ಶಿದಾಬಾದನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಕ್ರಿಯವಾಗಿದೆ ಎಂದು ಸುಕಾಂತ ಮಜುಂದಾರ ಹೇಳಿದ್ದಾರೆ. (ಈ ಸಂಘಟನೆಯನ್ನು ನಿಷೇಧಿಸಿದ್ದರೂ ಅದು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವುದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು) ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ಮುರ್ಶಿದಾಬಾದನಲ್ಲಿ ಏನಾಯಿತು ಎಂಬುದನ್ನು ಜಗತ್ತಿಗೆ ತಿಳಿಸಲು ಹಿಂಸಾಚಾರದಲ್ಲಿ ಸಂತ್ರಸ್ತರಾಗಿರುವ ಹಿಂದೂಗಳು ಕೋಲಕಾತಾಗೆ ಬಂದಿದ್ದರು ಎಂದು ಮಜುಂದಾರ ಮಾಹಿತಿ ನೀಡಿದರು.
ಸಂಪಾದಕೀಯ ನಿಲುವುಹೀಗೆ ಕಾಶ್ಮೀರದಲ್ಲೂ ಆಗುತ್ತಿತ್ತು. ಆದ್ದರಿಂದ ದೇಶದ ಪ್ರತಿಯೊಂದು ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕಲು ಆದೇಶ ನೀಡುವ ಅವಶ್ಯಕತೆ ಇದೆ. ಅದಕ್ಕಾಗಿ ಕೇಂದ್ರ ಸರಕಾರ ಪ್ರಯತ್ನಿಸಬೇಕು! |