Illegal Mosque Construction : ಮಸೀದಿಯ ಅಕ್ರಮ 3 ಮಹಡಿಗಳನ್ನು ಕೆಡವಲು ಆದೇಶ ನೀಡಿ 7 ತಿಂಗಳು ಕಳೆದರೂ ಕಾರ್ಯಾಚರಣೆ ಇಲ್ಲ !

ಶಿಮ್ಲಾ (ಹಿಮಾಚಲ ಪ್ರದೇಶ) ಇಲ್ಲಿನ ಸಂಜೌಲಿ ಮಸೀದಿಯ ಪ್ರಕರಣ

ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿನ ಸಂಜೌಲಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ 5 ಅಂತಸ್ತಿನ ಮಸೀದಿಯ ಅಕ್ರಮ 3 ಮಹಡಿಗಳನ್ನು ಕೆಡವಲು ಅಕ್ಟೋಬರ್ 2024 ರಲ್ಲಿ ಈ ಮಸೀದಿಗೆ ಆದೇಶ ನೀಡಲಾಗಿತ್ತು. ಈ ಆದೇಶವನ್ನು ನೀಡಿ 7 ತಿಂಗಳುಗಳು ಕಳೆದರೂ, ಮಸೀದಿ ಸಮಿತಿಯು ಈ ಮಹಡಿಗಳನ್ನು ಇನ್ನೂ ಕೆಡವಿಲ್ಲ. ಮಸೀದಿ ಸಮಿತಿಯು ಪ್ರತಿ ವಿಚಾರಣೆಯಲ್ಲೂ ಹೊಸ ನೆಪಗಳನ್ನು ನೀಡುತ್ತಿದೆ. ಇತ್ತೀಚಿನ ವಿಚಾರಣೆಯಲ್ಲಿ ನ್ಯಾಯಾಲಯವು ಸಮಿತಿಗೆ ಏಪ್ರಿಲ್ 26, 2025 ರಂದು ಅಂತಿಮ ದಿನಾಂಕವನ್ನು ನೀಡಿದೆ; ಆದರೆ ಆ ದಿನಾಂಕದಲ್ಲಿ ಮಹಡಿಗಳನ್ನು ಕೆಡವಲಾಗುತ್ತದೆಯೇ ಎಂಬ ಪ್ರಶ್ನೆ ಇದೆ.

1. ಮಹಾನಗರ ಪಾಲಿಕೆ ಆಯುಕ್ತರ ನ್ಯಾಯಾಲಯದ ಇತ್ತೀಚಿನ ವಿಚಾರಣೆಯಲ್ಲಿ, ಮಸೀದಿ ಸಮಿತಿಯು ಅಕ್ರಮ ನಿರ್ಮಾಣವನ್ನು ಕೆಡವಲು ಕ್ರಮ ಕೈಕೊಳ್ಳುತ್ತಿದೆ ಎಂದು ವಾದಿಸಿತು; ಆದರೆ ಇಲ್ಲಿಯವರೆಗೆ ಕೇವಲ ಶೇ. 50 ರಷ್ಟು ನಿರ್ಮಾಣ ಮಾತ್ರ ಕೆಡವಲಾಗಿದೆ. ಮಸೀದಿಯು ವಸತಿ ಪ್ರದೇಶದಲ್ಲಿರುವುದರಿಂದ, ತ್ವರಿತವಾಗಿ ಕೆಲಸ ಮಾಡುವುದು ಕಷ್ಟಕರವಾಗಿದೆ, ಎಂದು ಸಮಿತಿ ತಿಳಿಸಿದೆ.

2. ಈ ಬಗ್ಗೆ ನ್ಯಾಯಾಲಯವು ಕಠಿಣ ನಿಲುವು ತಳೆದು, ಏಪ್ರಿಲ್ 26 ರೊಳಗೆ ಉಳಿದ ನಿರ್ಮಾಣವನ್ನು ಸಂಪೂರ್ಣವಾಗಿ ತೆಗೆದುಹಾಕಲು ಆದೇಶಿಸಿತು. ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ಸಹ ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ನಿರ್ದೇಶಿಸಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

3. ಸಂಜೌಲಿಯ ಸ್ಥಳೀಯ ನಿವಾಸಿಗಳಲ್ಲಿ ಈ ಪ್ರಕರಣದ ಬಗ್ಗೆ ಸ್ಪಷ್ಟವಾದ ಆಕ್ರೋಶ ಕಂಡುಬರುತ್ತದೆ. ‘ದೇವಭೂಮಿ ಸಂಘರ್ಷ ಸಮಿತಿ’ಯ ಸಂಚಾಲಕ ಭರತ ಭೂಷಣ ಅವರು ಮಾತನಾಡಿ, ಮಸೀದಿ ಸಮಿತಿಯು ಉದ್ದೇಶಪೂರ್ವಕವಾಗಿ ಕೆಲಸವನ್ನು ವಿಳಂಬ ಮಾಡುತ್ತಿದೆ. ಮೊದಲು ಅವರು ‘ನಿಧಿಯ ಕೊರತೆ ಇದೆ’ ಎಂದರು, ಈಗ ‘ಕೆಡವಲಾದ ತ್ಯಾಜ್ಯವನ್ನು ತೆಗೆಯಲು ಸಮಯ ತೆಗೆದುಕೊಳ್ಳುತ್ತಿದೆ’ ಎನ್ನುತ್ತಿದ್ದಾರೆ. ಇವೆಲ್ಲ ನೆಪಗಳು. ಮಸೀದಿ ನಿರ್ಮಿಸಿರುವ ಭೂಮಿ ವಕ್ಫ್ ಮಂಡಳಿಯದ್ದಲ್ಲ, ಸರಕಾರದ ಸ್ವತ್ತಾಗಿದೆ. ಈಗ ಕಂದಾಯ ದಾಖಲೆಗಳಲ್ಲೇ ತಿರುಚುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

4. ಹಿಂದೂ ಜಾಗರಣ ಮಂಚ್‌ ನ ಕಮಲ ಗೌತಮ ಅವರು ಮಾತನಾಡಿ, ಸರಕಾರದ ವಿಳಂಬದಿಂದಾಗಿ ಈ ಪ್ರಕರಣವು ವೇಗವಾಗಿ ಮುಂದುವರಿಯುತ್ತಿಲ್ಲ. ಸರಕಾರ ನಿರ್ಧರಿಸಿದರೆ, ಈ ಕೆಲಸವು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ. ಮಸೀದಿಯು ಬುಲ್ಡೋಜರ್ ಅಥವಾ ಯಾವುದೇ ದೊಡ್ಡ ಯಂತ್ರೋಪಕರಣಗಳನ್ನು ಕೊಂಡೊಯ್ಯಲು ಸಾಧ್ಯವಾಗದ ಸ್ಥಳದಲ್ಲಿದೆ ಮತ್ತು ಸಂಪೂರ್ಣ ಮಸೀದಿಯನ್ನು ಕೈಯಿಂದ ಮಾತ್ರ ಕೆಡವಲು ಸಾಧ್ಯವಿದೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಅಕ್ರಮ ನಿರ್ಮಾಣವನ್ನು ಕೆಡವಲು ಹಿಂದೂಗಳು ದೊಡ್ಡ ಪ್ರತಿಭಟನೆ ನಡೆಸಿದ ನಂತರ ಅದನ್ನು ಕೆಡವಲು ಆದೇಶ ನೀಡಿದ್ದರೂ, ಮಸೀದಿ ಸಮಿತಿಯು ಅದನ್ನು ಕೆಡವದಿದ್ದರೆ, ಸರಕಾರ ಅದನ್ನು ಕೆಡವಬೇಕು ಮತ್ತು ವೆಚ್ಚವನ್ನು ಸಮಿತಿಯಿಂದ ವಸೂಲಿ ಮಾಡಬೇಕು!