ಕರಾಚಿ (ಪಾಕಿಸ್ತಾನ) – ಇಲ್ಲಿ ಏಪ್ರಿಲ್ ೧೫ ರಂದು ಹನುಮ ಜಯಂತಿಯ ಪ್ರಯುಕ್ತ ‘ಜೈ ಶ್ರೀರಾಮ್’ ಮತ್ತು ‘ಜೈ ಹನುಮಾನ್’ ಎಂಬ ಘೋಷಣೆಗಳೊಂದಿಗೆ ಮೆರವಣಿಗೆ ನಡೆಯಿತು. ಈ ಮೆರವಣಿಗೆ ಅನೇಕ ಮಸೀದಿಗಳ ಮುಂದೆ ಹಾದು ಹೋಯಿತು; ಆದರೆ ಎಲ್ಲಿಯೂ ಅದರ ಮೇಲೆ ದಾಳಿ ಅಥವಾ ಕಲ್ಲು ತೂರಾಟ ನಡೆಯಲಿಲ್ಲ. ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಕರಾಚಿಯಲ್ಲಿ ೧ ಸಾವಿರದ ೫೦೦ ವರ್ಷಗಳಷ್ಟು ಹಳೆಯದಾದ ದೇವಾಲಯವಿದೆ
ಹನುಮ ಜಯಂತಿಯಂದು ಕರಾಚಿಯ ಸಾವಿರಾರು ಹಿಂದೂಗಳು ೧ ಸಾವಿರದ ೫೦೦ ವರ್ಷಗಳಷ್ಟು ಹಳೆಯದಾದ ಪಂಚಮುಖಿ ಹನುಮಾನ್ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬಂದಿದ್ದರು. ದೇವಾಲಯದಲ್ಲಿ ಧ್ವಜಾರೋಹಣ ಮಾಡಲು ಬರುವ ಹಿಂದೂಗಳಿಗೆ ಈ ದೇವಾಲಯದ ಮೇಲೆ ಅಪಾರ ಶ್ರದ್ಧೆ ಇದೆ. ಹನುಮ ಜಯಂತಿಯ ಪ್ರಯುಕ್ತ ಸಾವಿರಾರು ಜನರು ಧ್ವಜಗಳನ್ನು ಹಿಡಿದು ಕರಾಚಿಯ ಬೀದಿಗಳಲ್ಲಿ ಸೇರಿದ್ದರು.
ಸಂಪಾದಕೀಯ ನಿಲುವುಕರಾಚಿಯಲ್ಲಿ ಹನುಮ ಜಯಂತಿಯ ಮೆರವಣಿಗೆ ಶಾಂತಿಯುತವಾಗಿ ಮತ್ತು ಯಾವುದೇ ದಾಳಿಯಿಲ್ಲದೆ ನಡೆಯುವುದು ಯಾರಿಗಾದರೂ ಆಶ್ಚರ್ಯವನ್ನುಂಟು ಮಾಡಬಹುದು; ಆದರೆ ಮಾತಾಂಧರ ಮನಸ್ಥಿತಿಯನ್ನು ನೋಡಿದರೆ, ಈ ಪರಿಸ್ಥಿತಿ ಯಾವಾಗಲೂ ಹೀಗೆ ಇರುತ್ತದೆ ಎಂದು ನಂಬಲು ಸಾಧ್ಯವಿಲ್ಲ ಎಂಬುದು ಕೂಡ ಅಷ್ಟೇ ಸತ್ಯ! |