Graham Staines Case : ಪಾದ್ರಿ ಗ್ರಹಾಂ ಸ್ಟೇನ್ಸ್ ಹತ್ಯೆ ಪ್ರಕರಣದಲ್ಲಿನ ಆರೋಪಿ ೨೫ ವರ್ಷಗಳ ನಂತರ ಬಿಡುಗಡೆ

 

ಬಲಭಾಗದಲ್ಲಿ ದಾರಾ ಸಿಂಗ್

ಭುವನೇಶ್ವರ (ಒಡಿಶಾ) – ಆಸ್ಟ್ರೇಲಿಯಾದ ಮಿಷನರಿ ಪಾದ್ರಿ ಗ್ರಹಾಂ ಸ್ಟೇನ್ಸ್ ಮತ್ತು ಅವನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ೧೯೯೯ ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಹೇಂದ್ರ ಹೆಂಬ್ರಮ್ ಅವರನ್ನು ಏಪ್ರಿಲ್ ೧೬ ರಂದು ಒಡಿಶಾದ ಕಿಯೋಂಜಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ೨೫ ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ನಂತರ, ೫೧ ವರ್ಷದ ಹೆಂಬ್ರಮ್ ಅವರನ್ನು ‘ಒಳ್ಳೆಯ ನಡತೆ’ಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ದಾರಾ ಸಿಂಗ ಜೊತೆಗೆ ಹೆಂಬ್ರಮ್ ಅವರನ್ನು ಈ ಅಪರಾಧದಲ್ಲಿ ದೋಷಿ ಎಂದು ಪರಿಗಣಿಸಲಾಗಿತ್ತು. ಬಿಡುಗಡೆಯ ನಂತರ ಹೆಂಬ್ರಮ್ ಅವರು, ಮತಾಂತರ ಮತ್ತು ಗೋಹತ್ಯೆಯನ್ನು ವಿರೋಧಿಸಿದ್ದರಿಂದ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ನಿರಪರಾಧಿಯಾಗಿದ್ದರೂ ಶಿಕ್ಷೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಪ್ರಕರಣದ ಮುಖ್ಯ ಆರೋಪಿ ದಾರಾ ಸಿಂಗ್ ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತ ಅವಧಿಪೂರ್ವ ಬಿಡುಗಡೆಗಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು, ಅದರ ಬಗ್ಗೆ ಮಾರ್ಚ್ ೯ ರಂದು ಒಡಿಶಾ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ದಾರಾ ಸಿಂಗ್ ನ ಬಿಡುಗಡೆಯ ಬಗ್ಗೆ ಮುಂದಿನ ಕೆಲವು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು.