ದೇಶದಲ್ಲಿ ಶುಭ ಘಟನೆಗಳು ಸಂಭವಿಸುವ ಸಾಧ್ಯತೆ ಎಂದು ಕೆಲವು ಭಕ್ತರ ಅಭಿಪ್ರಾಯ
ಪುರಿ (ಒಡಿಶಾ) – ಇಲ್ಲಿನ ಭಗವಾನ್ ಜಗನ್ನಾಥ ದೇವಾಲಯದ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಒಂದು ಗರುಡ ಪಕ್ಷಿ ದೇವಾಲಯದ ಶಿಖರದ ಮೇಲಿನ ಧ್ವಜದ ಸ್ವಲ್ಪ ಭಾಗವನ್ನು ತೆಗೆದುಕೊಂಡು ಹಾರಾಡುತ್ತಿರುವುದು ಕಂಡುಬಂದಿದೆ. ಧ್ವಜದ ಸ್ವಲ್ಪ ಭಾಗವು ಅದರ ಕಾಲಿನ ಉಗುರುಗಳಲ್ಲಿ ಸಿಕ್ಕಿಹಾಕಿಕೊಂಡಂತೆ ಕಾಣಿಸುತ್ತಿದೆ. ಈ ಘಟನೆಯಿಂದ ದೇಶದಲ್ಲಿ ಶುಭ ಘಟನೆಗಳು ನಡೆಯಲಿವೆ ಎಂದು ಕೆಲವು ಭಕ್ತರು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ದೇಶದಲ್ಲಿ ಅಶುಭ ಘಟನೆಗಳು ಸಂಭವಿಸುವ ಭಯವನ್ನು ವ್ಯಕ್ತಪಡಿಸಿದ್ದಾರೆ. ೨೦೨೦ ರಲ್ಲಿ ಮಿಂಚು ಬಡಿದ ಪರಿಣಾಮವಾಗಿ ದೇವಾಲಯದ ಧ್ವಜಕ್ಕೆ ಬೆಂಕಿ ತಗುಲಿತ್ತು ಮತ್ತು ನಂತರ ದೇಶವು ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸಬೇಕಾಯಿತು ಎಂಬುದನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ೮೦೦ ವರ್ಷಗಳಷ್ಟು ಹಳೆಯದಾದ ಜಗನ್ನಾಥ ದೇವಾಲಯದ ಶಿಖರದ ಮೇಲಿನ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತದೆ. ದೇವಾಲಯದಲ್ಲಿ ಪ್ರತಿದಿನ ಧ್ವಜವನ್ನು ಬದಲಾಯಿಸಲಾಗುತ್ತದೆ. ಈ ಸಂಪ್ರದಾಯವು ಶತಮಾನಗಳಿಂದ ಅವಿಚ್ಛಿನ್ನವಾಗಿ ಮುಂದುವರೆದಿದೆ. “ಈ ಸಂಪ್ರದಾಯವು ನಿಂತುಹೋದರೆ, ದೇವಾಲಯವು ೧೮ ವರ್ಷಗಳ ಕಾಲ ಮುಚ್ಚಲ್ಪಡುತ್ತದೆ” ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ದೇವಾಲಯದ ಬಾಗಿಲು ತೆರೆದರೆ, ವಿಪತ್ತು ಸಂಭವಿಸಬಹುದು ಎಂಬ ನಂಬಿಕೆಯೂ ಇದೆ.
ಪುರಿಯ ಶ್ರೀ ಜಗನ್ನಾಥ ದೇವಾಲಯದ ಮೇಲಿನ ಧ್ವಜವನ್ನು ಗರುಡ ತೆಗೆದುಕೊಂಡು ಹೋಗುವುದು ಮತ್ತು ಅದೇ ಸಮಯದಲ್ಲಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಹೈದರಾಬಾದ್ನ ಶ್ರೀ ಜಗನ್ನಾಥ ದೇವಾಲಯದ ಮೇಲಿನ ನೀಲಚಕ್ರವು ಪ್ರಕಾಶಮಾನವಾಗಿ ಕಾಣಿಸುವುದು, ಈ ಎರಡೂ ಘಟನೆಗಳ ಹಿಂದೆ ಹಿಂದೂ ರಾಷ್ಟ್ರದ ಸ್ಥಾಪನೆಯ ದೈವೀ ಸಂಕೇತಗಳಿರುವುದು![]() ‘೧೨.೪.೨೦೨೫ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರೊಂದಿಗೆ ನಾವು ಸಾಧಕರು ಹೈದರಾಬಾದ್ನಲ್ಲಿ ಪ್ರಯಾಣಿಸುತ್ತಿದ್ದೆವು. ಆ ಸಮಯದಲ್ಲಿ ಅಲ್ಲಿ ಪುರಿ (ಒಡಿಶಾ)ಯ ಶ್ರೀ ಜಗನ್ನಾಥ ದೇವಸ್ಥಾನದ ಪ್ರತಿಕೃತಿಯ ದೇವಾಲಯವು ಕಂಡುಬಂತು. ದೇವಾಲಯವನ್ನು ನೋಡಿದ ತಕ್ಷಣ ಶ್ರೀಚಿತ್ ಶಕ್ತಿ (ಸೌ.) ಗಾಡಗೀಳ ಅವರ ದೃಷ್ಟಿಯು ಆ ದೇವಾಲಯದ ಮೇಲಿದ್ದ ನೀಲಚಕ್ರದ ಮೇಲೆ ಬಿತ್ತು. ಆ ಸಮಯದಲ್ಲಿ ಆ ನೀಲಚಕ್ರವು ಬಹಳ ಪ್ರಕಾಶಮಾನವಾಗಿ ಕಾಣಿಸಿತು. ![]() ನಂತರ ನಮಗೆ ತಿಳಿದುಬಂದ ವಿಷಯವೆಂದರೆ, ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ ಮೇಲಿನ ಧ್ವಜವನ್ನು ಗರುಡವು ಹಾರಿಸಿಕೊಂಡು ಹೋಗುತ್ತಿರುವ ಘಟನೆಯು ಅದೇ ಅವಧಿಯಲ್ಲಿ ಸಂಭವಿಸಿದೆ. ಈ ದೇವಾಲಯದ ನೀಲಚಕ್ರದ ಸಮೀಪದಲ್ಲೇ ಈ ಧ್ವಜವನ್ನು ಹಾಕಲಾಗಿದ್ದು, ಅದು ಹಾರಾಡುತ್ತಿರುತ್ತದೆ. ಶ್ರೀಚಿತ್ ಶಕ್ತಿ (ಸೌ.) ಗಾಡಗೀಳ ಅವರಿಗೆ ಹೈದರಾಬಾದ್ನ ದೇವಾಲಯದ ಮೇಲಿನ ನೀಲಚಕ್ರವು ಪ್ರಕಾಶಮಾನವಾಗಿ ಕಾಣಿಸುವುದು ಮತ್ತು ಅದೇ ಸಮಯದಲ್ಲಿ ಪುರಿಯ ದೇವಸ್ಥಾನದ ಮೇಲಿನ ಧ್ವಜವನ್ನು ಗರುಡವು ತೆಗೆದುಕೊಂಡು ಹೋಗುವುದು, ಈ ಎರಡೂ ಘಟನೆಗಳ ಹಿಂದೆ ಹಿಂದೂ ರಾಷ್ಟ್ರದ ಸ್ಥಾಪನೆಯ ದೈವೀ ಸಂಕೇತಗಳಿವೆ ಎಂದು ಗಮನಕ್ಕೆ ಬಂದಿದೆ.’ ಶ್ರೀ. ವಾಲ್ಮೀಕ ಭುಕನ, ಚೆನ್ನೈ |