Delhi University Cow Dung Issue : ವಿದ್ಯಾರ್ಥಿ ಸಂಘಟನೆ ಇದನ್ನು ವಿರೋಧಿಸಿ ಪ್ರಾಂಶುಪಾಲರ ಕಚೇರಿಯ ಗೋಡೆಗಳಿಗೆ ಸಗಣಿ ಹಚ್ಚಿದರು

  • ದೆಹಲಿ ವಿಶ್ವವಿದ್ಯಾಲಯದ ಪ್ರಾಂಶುಪಾಲರಿಂದ ತರಗತಿಯ ಗೋಡೆಗೆ ಸಗಣಿಯಿಂದ ಸಾರಿದ ಪ್ರಕರಣ

  • ಪ್ರಾಚಾರ್ಯರು ತಮ್ಮ ಮನೆಯಲ್ಲಿ ಪ್ರಯೋಗಿಸಬೇಕು! – ಕುಲಪತಿಗಳಿಂದಲೂ ವಿರೋಧ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮೀಬಾಯಿ ಕಾಲೇಜಿನ ತರಗತಿಯ ಗೋಡೆಯನ್ನು ಪ್ರಾಂಶುಪಾಲರು ಸಗಣಿಯಿಂದ ಸಾರಿಸಿದ್ದರಿಂದ ವಿವಾದ ಉಂಟಾಗಿದೆ. ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರೌನಕ ಖತ್ರಿ ಅವರು ಏಪ್ರಿಲ್ 15 ರಂದು ಪ್ರಾಂಶುಪಾಲೆ ಪ್ರತ್ಯುಷಾ ವತ್ಸಲಾ ಅವರ ಕಚೇರಿಯ ಗೋಡೆಗಳಿಗೆ ಸಗಣಿ ಹಚ್ಚಿದರು. ಅವರು “ಪ್ರತಿಯೊಬ್ಬರೂ ಸ್ವಲ್ಪ ತಂಪನ್ನು ಅನುಭವಿಸಬೇಕು” ಎಂದು  ವ್ಯಂಗ್ಯವಾಡಿದರು.

1. ಈ ಕುರಿತು ಕುಲಪತಿ ಯೋಗೇಶ ಸಿಂಗ ಅವರು ಮಾತನಾಡಿ, “ಈ ಪದ್ಧತಿಯಿಂದ (ಸಗಣಿ ಸಾರಿಸುವ) ಕೊಠಡಿಗಳ ಉಷ್ಣತೆಯನ್ನು ಕಡಿಮೆ ಮಾಡಬಹುದಾದರೆ, ಪ್ರಾಂಶುಪಾಲರು ಮೊದಲು ತಮ್ಮ ಮನೆ ಮತ್ತು ಕಚೇರಿಯಲ್ಲಿ ಹಾಗೆ ಮಾಡಿ ನೋಡಲಿ. ತರಗತಿ ಕೊಠಡಿಗಳಲ್ಲಿ ಕೂಲರ್ ಮತ್ತು ಫ್ಯಾನ್‌ಗಳ ಕೊರತೆಯನ್ನು ನೀಗಿಸಬೇಕು. ಅವರು 10 ವರ್ಷಗಳಿಂದ ಪ್ರಾಂಶುಪಾಲರಾಗಿದ್ದಾರೆ, ಹಾಗಾದರೆ ಅವರು ಈ ಕಡೆ ಗಮನ ಹರಿಸಲಿಲ್ಲ ಏಕೆ?” ಎಂದು ಪ್ರಶ್ನಿಸಿದರು.

2. ಈ ಘಟನೆಯ ಬಗ್ಗೆ ಪ್ರಾಂಶುಪಾಲೆ ಡಾ. ವತ್ಸಲಾ ಅವರು ಮಾತನಾಡಿ, “ಈ ಸಂಶೋಧನೆಯನ್ನು ಕಾಲೇಜಿನ ಪೋರ್ಟಾ ಕ್ಯಾಬಿನ್‌ನಲ್ಲಿ (ಒಂದು ರೀತಿಯ ಕೊಠಡಿ) ಮಾಡಲಾಗುತ್ತಿದೆ. ನಾನು ಸ್ವತಃ ಕೊಠಡಿಯ ಗೋಡೆಗೆ ಸಗಣಿ ಲೇಪಿಸಿದ್ದೇನೆ; ಏಕೆಂದರೆ ಮಣ್ಣು ಮತ್ತು ಸಗಣಿಯಂತಹ ನೈಸರ್ಗಿಕ ವಸ್ತುಗಳನ್ನು ಸ್ಪರ್ಶಿಸುವುದರಲ್ಲಿ ಯಾವುದೇ ಹಾನಿ ಇಲ್ಲ. ಕೆಲವರು ಯಾವುದೇ ಮಾಹಿತಿ ಇಲ್ಲದೆ ವದಂತಿಗಳನ್ನು ಹರಡುತ್ತಿದ್ದಾರೆ” ಎಂದರು.

ಸಂಪಾದಕೀಯ ನಿಲುವು

ಇಂದಿಗೂ ದೇಶದ ಅನೇಕ ಹಳ್ಳಿಗಳಲ್ಲಿ ಮನೆಗಳ ಗೋಡೆಗಳು ಮತ್ತು ನೆಲವನ್ನು ಸಗಣಿಯಿಂದ ಸಾರಿಸಲಾಗುತ್ತದೆ. ಇದರಿಂದ ಅನೇಕ ಪ್ರಯೋಜನಗಳಿವೆ ಎಂದು ಕಾಲಕಾಲಕ್ಕೆ ಸಂಶೋಧನೆಗಳಿಂದ ತಿಳಿದುಬಂದಿದೆ. ಹೀಗಿರುವಾಗ, ಇಂತಹ ಮೂರ್ಖತನವನ್ನು ಮಾಡಿ ಅದನ್ನು ವಿರೋಧಿಸುವವರು ಹಾಸ್ಯಾಸ್ಪದರಾಗುತ್ತಿದ್ದಾರೆ ಎಂಬುದನ್ನು ಅವರು ಗಮನಿಸಬೇಕು!