Anwar Sheikh Left Islam : ಹಿಂದೂ ಧರ್ಮದಿಂದ ಪ್ರಭಾವಿತರಾಗಿ ಅನ್ವರ ಶೇಖ್ ಇವರಿಂದ ಹಿಂದೂ ಧರ್ಮ ಸ್ವೀಕಾರ !

ಖಾಂಡವಾ (ಮಧ್ಯಪ್ರದೇಶ) – ಹಿಂದೂ ಧರ್ಮದ ಭವ್ಯತೆಯಿಂದ ಪ್ರಭಾವಿತರಾದ ಅನ್ವರ್ ಶೇಖ್ ಇಸ್ಲಾಂ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾದ ನಿವಾಸಿಯಾದ ಅನ್ವರ್ ಶೇಖ್ ಈಗ ರಾಧೇಶ್ಯಾಮ್ ಆಗಿದ್ದಾರೆ. ಈ ಸಂದರ್ಭದಲ್ಲಿ ಅನ್ವರ್ ಶೇಖ್ ಅವರ ತಲೆ ಬೋಳಿಸಿ ಗಂಗಾಜಲದಿಂದ ಸ್ನಾನ ಮಾಡಿಸಲಾಯಿತು. ನಂತರ ಪೂರ್ಣ ವಿಧಿವಿಧಾನಗಳೊಂದಿಗೆ ಅವರನ್ನು ಸನಾತನ ಧರ್ಮಕ್ಕೆ ಸೇರಿಸಿಕೊಳ್ಳಲಾಯಿತು ಮತ್ತು ಅವರಿಗೆ ರಾಧೇಶ್ಯಾಮ್ ಎಂದು ಹೆಸರಿಡಲಾಯಿತು. ಈ ಸಂದರ್ಭದಲ್ಲಿ ಜನರು ರಾಧೇಶ್ಯಾಮ್ ಇವರನ್ನು ಅಭಿನಂದಿಸಿದರು.

ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ರಾಧೇಶ್ಯಾಮ್ ಅವರು ಮಾತನಾಡಿ, “ಹಿಂದೂ ಧರ್ಮದಲ್ಲಿ ಭವ್ಯತೆ ಮತ್ತು ಸಂಪ್ರದಾಯಗಳಿವೆ. ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಲಾಗುತ್ತದೆ. ಸನಾತನ ಧರ್ಮದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ವಿಧಿಗಳು ಎಲ್ಲರಿಗೂ ಸಮಾನವಾಗಿವೆ. ಬಾಲ್ಯದಿಂದಲೂ ನನ್ನ ಮನಸ್ಸಿನ ಮೇಲೆ ಸನಾತನ ಧರ್ಮದ ಸಂಪ್ರದಾಯಗಳ ಪ್ರಭಾವವಿತ್ತು. ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ದೇವಿಯಂತೆ ಪೂಜಿಸಲಾಗುತ್ತದೆ. ಈ ಧರ್ಮದಷ್ಟು ಮಹಿಳೆಯರನ್ನು ಗೌರವಿಸುವ ಬೇರೆ ಯಾವುದೇ ಧರ್ಮವಿಲ್ಲ. ಭೂಮಿ ಮತ್ತು ನದಿಗಳಿಗೂ ತಾಯಿಯ ಸ್ಥಾನ ನೀಡಲಾಗಿದೆ.”, ಎಂದು ಹೇಳಿದರು.

ರಾಧೇಶ್ಯಾಮ್ ಅವರು ಲಕ್ಷ್ಮಿ ಎಂಬ ಹಿಂದೂ ಹುಡುಗಿಯನ್ನು ವಿವಾಹವಾಗಿದ್ದರು. ಪತ್ನಿಯ ಹಿಂದೂ ಧರ್ಮದ ಮೇಲಿನ ನಂಬಿಕೆಯಿಂದ ಅನ್ವರ್ ಶೇಖ್ ರಾಧೇಶ್ಯಾಮ್ ಆಗಲು ಆಕರ್ಷಿತರಾದರು.

ಸಂಪಾದಕೀಯ ನಿಲುವು

ವಿವಿಧ ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮವನ್ನು ತ್ಯಜಿಸುವವರಿಗೆ ಈಗಲಾದರೂ ಹಿಂದೂ ಧರ್ಮದ ಮಹತ್ವ ತಿಳಿಯುವುದೇ ?