‘ಬಾಜಿರಾವ್ ಮಸ್ತಾನಿ’ ಚಲನಚಿತ್ರದ ವೇದಿಕೆಯಲ್ಲಿ ಭೂತವನ್ನು ನೋಡಿದ್ದೇನೆ – ನಟ ರಣವೀರ್ ಸಿಂಗ್ !

ಈ ಬಗ್ಗೆ ಅಂಧಶ್ರದ್ಧೆ ನಿರ್ಮೂಲನೆಯವರು ಏನು ಹೇಳಲಿಕ್ಕಿದೆ ? ಈಗ ಯಾರನ್ನು ‘ವಿಜ್ಞಾನವಾದಿ’ ಎಂದು ಕರೆಯಬೇಕು ? ಈ ಘಟನೆಯನ್ನು ‘ಮೂಢನಂಬಿಕೆ’ ಎಂದು ಕರೆದು ಕೈ ಚೆಲ್ಲುವವರನ್ನೋ ಅಥವಾ ಈ ಸೂಕ್ಷ್ಮ ಶಕ್ತಿಗಳನ್ನು ಸಂಶೋಧಿಸುವ ಮೂಲಕ ಅದರ ಹಿಂದಿನ ಸತ್ಯವನ್ನು ತಿಳಿದಿರುವವರನ್ನೋ ? ಎಂದು ಜನರಿಗೆ ಗೊತ್ತಾಗಿದೆ.

ನಟ ರಣವೀರ್ ಸಿಂಗ್

ಮುಂಬಯಿ : ನಟ ರಣವೀರ್ ಸಿಂಗ್ ಸಂದರ್ಶನವೊಂದರಲ್ಲಿ ‘ಬಾಜಿರಾವ್ ಮಸ್ತಾನಿ’ ಚಲನಚಿತ್ರದ ವೇದಿಕೆ(ಸೆಟ್)ಯಲ್ಲಿ ಭೂತವೊಂದನ್ನು ನೋಡಿದ್ದೇನೆ ಎಂದು ಹೇಳಿದರು. ಆ ಭೂತ ಎಂದರೆ ‘ಬಾಜಿರಾವ್ ಪೇಶ್ವೆ’ಯ ಆತ್ಮ ಎಂದು ಅವರು ಹೇಳಿದ್ದಾರೆ. ನಾನು ಹಿಂದೆಂದೂ ಆತ್ಮಗಳು ಮತ್ತು ದೆವ್ವಗಳನ್ನು ನಂಬುತ್ತಿರಲಿಲ್ಲ; ಆದರೆ ಆಗ ನನಗೆ ತುಂಬಾ ಭಯವಾಗಿತ್ತು. ಇದು ನನಗೆ ಚಿತ್ರೀಕರಣದ ಅತ್ಯಂತ ಕಷ್ಟದ ದಿನಗಳಾಗಿದ್ದವು, ಎಂದು ರಣವೀರ್ ಸಿಂಗ್ ಹೇಳಿದ್ದಾರೆ.

ಈ ಸಮಯದಲ್ಲಿ ಸಿಂಗ್ ಅವರು ಮುಂದಿನಂತೆ ಹೇಳಿದರು,

. ನನ್ನ ಸುತ್ತಲೂ ಯಾವಾಗಲೂ ಯಾರಾದರೂ ಇದ್ದಾರೆ ಎಂದು ನನಗೆ ಅರಿವಾಗುತ್ತಿತ್ತು. ‘ಅದು ಬಾಜಿರಾವ್ ಆಗಿರಬೇಕು’, ಎಂದು ನನಗೆ ಅನಿಸಿತು.

. ಬಾಜಿರಾವ್ ಪೇಶ್ವೆ ಅವರ ಆತ್ಮವು ನನಗೆ ನಿಜವಾಗಿಯೂ ಕಂಡರೆ ಏನಾಗುವುದು ಎಂದು ನಾನು ನಿರಂತರವಾಗಿ ಯೋಚಿಸುತ್ತಿದ್ದೆ, ನಾನು ಯಾಕೆ ಹಾಗೆ ಯೋಚಿಸುತ್ತಿದ್ದೇನೆ ಎಂದು ನನಗೆ ಗೊತ್ತಿಲ್ಲ; ಆದರೆ ಕೆಲವೇ ದಿನಗಳಲ್ಲಿ, ಅದು ನಿಜವಾಗಿ ಸಂಭವಿಸಿತು. ‘ನಾನು ಅವನೇ (ಬಾಜಿರಾವ್) ಆಗಿದ್ದೇನೆ’, ಎಂದು ಯಾರೋ ನನ್ನ ಕಿವಿಯಲ್ಲಿ ಪಿಸುಗುಟ್ಟುತ್ತಿರುವುದು ನನಗೆ ಅರಿವಾಯಿತು.

೩. ಒಂದು ದಿನ ನನಗೆ ವೇದಿಕೆಯಲ್ಲಿ ಒಂದು ದೊಡ್ಡ ಟಾಸ್ಕಅನ್ನು ನೀಡಲಾಯಿತು. ಈ ಟಾಸ್ಕ ಉತ್ತಮವಾಗಿ ನಡೆಯಬೇಕೆಂದು ನಾನು ಪ್ರಾರ್ಥಿಸುತ್ತಿದ್ದೆ. ವೇದಿಕೆಯ ಮೇಲೆ ಕಪ್ಪು ಬಣ್ಣದ ಗೋಡೆ ಇತ್ತು. ಈ ಗೋಡೆಯ ಮೇಲೆ ಬಿಳಿ ಧೂಳು ಸಂಗ್ರಹವಾಗಿ ಒಂದು ವಿಶಿಷ್ಟ ಆಕೃತಿಯು ತನ್ನಿಂದತಾನೇ ಮೂಡಿತು. ಅದೇ ಪೇಟ, ಅದೇ ಕಣ್ಣುಗಳು, ಅದೇ ಮೀಸೆ ! ಅದು ನಿಖರವಾಗಿ ಬಾಜಿರಾವ್ ಪೇಶ್ವೆಯವರಂತೆಯೇ ಆಕೃತಿ ಮೂಡಿತ್ತು. ಈ ಆಕೃತಿಯನ್ನು ವೇದಿಕೆಯಲ್ಲಿದ್ದ ಅನೇಕರಿಗೆ ತೋರಿಸಿದೆ. ಈ ಆಕೃತಿಯು ಬಾಜಿರಾವ್ ಪೇಶ್ವೆ ಅವರಂತೆಯೇ ಕಾಣಿಸುತ್ತದೆ ಎಂದು ಹಲವರು ಒಪ್ಪಿದ್ದರು.

ಈ ಹಿಂದೆ ಹಿಂದಿ ಚಲನಚಿತ್ರೋದ್ಯಮದ ನಟಿ ಬಿಪಾಶಾ ಬಸು, ನಟ ಇಮ್ರಾನ್ ಹಶ್ಮಿ ಮತ್ತು ವರುಣ ಧವನ ಇವರು ಸಹ ಚಿತ್ರೀಕರಣದ ಸಮಯದಲ್ಲಿ ಅವರಿಗೆ ಇಂತಹ ವಿಚಿತ್ರ ಅನುಭವವಾಗಿತ್ತು ಎಂದು ಹೇಳಿದ್ದಾರೆ.