ನವ ದೆಹಲಿ – ನಾಳೆ ಜನವರಿ ೧೬ ರಿಂದ ದೇಶದಲ್ಲಿ ಕೊರೊನಾ ಪ್ರತಿಬಂಧಕ ಲಸಿಕೀಕರಣ ಪ್ರಾರಂಭವಾಗಲಿದೆ. ಕೇಂದ್ರೀಯ ಆರೋಗ್ಯ ಸಚಿವಾಲಯವು ನೀಡಿದ ಮಾಹಿತಿಗನುಸಾರ ಮೊದಲ ದಿನ ಅಂದಾಜು ೩ ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುವುದು. ಆಸ್ಪತ್ರೆಯ ಇತರ ವೈದ್ಯಕೀಯ ಸೇವೆಗಳಿಗೆ ತೊಂದರೆಯಾಗಬಾರದು ಎಂದು ಜನವರಿಯಲ್ಲಿ ಒಟ್ಟು ೧೦ ದಿನ ಮಾತ್ರ ಲಸಿಕೀಕರಣ ಮಾಡಲಾಗುವುದು, ಆ ೧೦ ದಿನಗಳು ಯಾವುವು ಎಂಬುದರ ನಿರ್ಣಯವನ್ನು ರಾಜ್ಯಗಳು ತೆಗೆದುಕೊಳ್ಳಬೇಕಾಗಿದೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯಕ್ಕನುಸಾರ ಸತತ ಲಸಿಕೀಕರಣದಿಂದ ನೌಕರರು ಆಯಾಸಗೊಳ್ಳಬಹುದು. ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯ ನೌಕರರ ಸಂಖ್ಯೆಯು ಕಡಿಮೆ ಇರುವುದರಿಂದ ಸತತ ೧೫ ದಿನ ಲಸಿಕೀಕರಣದ ಆವಶ್ಯಕತೆ ಉಂಟಾಗಲಾರದು. ಹಾಗಾಗಿ ೧೦ ದಿನವೇ ಲಸಿಕೆ ನೀಡುವ ಅಭಿಯಾನದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
(ಸೌಜನ್ಯ : The Economic Times)
೧. ಪ್ರತಿಯೊಂದು ಕೇಂದ್ರದಲ್ಲಿ ಒಂದು ದಿನ ೧೦೦ ಜನರಿಗೆ ಲಸಿಕೆ ನೀಡಲಾಗುವುದು. ೧೦ ದಿನಗಳೊಳಗೆ ದೇಶದಲ್ಲಿ ಅಂದಾಜು ೨ ಸಾವಿರ ೯೩೪ ಲಸಿಕಾ ಕೇಂದ್ರಗಳಿರುವುವು ಅನಂತರ ಅದನ್ನು ೫ ಸಾವಿರಕ್ಕೇರಿಸಲಾಗುವುದು. ಅನಂತರ ಪ್ರತಿದಿನ ೫ ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು
೨. ಸೋಂಕು ರೋಗ (ಅಂಟುರೋಗ), ನೆಗಡಿ, ಕೆಮ್ಮು, ಜ್ವರ ಇರುವವರಿಗೆ ಲಸಿಕೆ ನೀಡಲು ನಿರ್ಬಂಧವಿದೆ. ಯಾರಲ್ಲಿ ಆಂಡ್ರಾಯ್ಡ್ ಫೋನ್ ಇಲ್ಲವೋ ಅವರು ತಮ್ಮ ಕುಟುಂಬದವರು, ಮಿತ್ರರ ಫೋನ್ ಅನ್ನು ಉಪಯೋಗಿಸಬಹುದು. ಏಕೆಂದರೆ ಎರಡು ಡೊಸ್ ಲಸಿಕೆಯಾದ ನಂತರ ಇದೇ ಸಂಚಾರೀ ದೂರವಾಣಿ ಸಂಖ್ಯೆಗೆ ಒಂದು ‘ಕ್ಯೂಆರ್ ಕೋಡ್’ ಬರಲಿದೆ. ಇದರಿಂದ ಲಸಿಕೆ ಚುಚ್ಚಿದ ನಂತರ ಸಿಗುವ ಪ್ರಮಾಣಪತ್ರವನ್ನು ಡೌನ್ ಲೋಡ್’ ಮಾಡಬಹುದು.

ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack
ವಿಶೇಷ ತನಿಖಾ ತಂಡ ಸತ್ಯಾಸತ್ಯತೆಯನ್ನು ಹೊರಹಾಕಲಿದೆ! : Yogi Adityanath
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!