ಹಬ್ಬಗಳ ಕಾಲಾವಧಿಯಲ್ಲಿ ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಸಂಚು ! – ಗುಪ್ತಚರ ಇಲಾಖೆ

  • ಇದರಿಂದ ಭಯೋತ್ಪಾದಕರು ಜಿಹಾದಿ ಮನಸ್ಸಿನವರಾಗಿರುತ್ತಾರೆ ಹಾಗೂ ಅವರ ಗುರಿ ಯಾವಾಗಲೂ ಹಿಂದೂಗಳ ಮೇಲಿರುತ್ತದೆ, ಎಂಬುದು ಇದರಿಂದ ದೃಢವಾಗುತ್ತದೆ ! ಹಿಂದೂಗಳಿಗಾಗುವ ಬೆದರಿಕೆಯ ಬಗ್ಗೆ ಪ್ರಗತಿ (ಅಧೋಗತಿ)ಪರರು, ಕಾಂಗ್ರೆಸ್, ಕಮ್ಯುನಿಸ್ಟ್, ಪ್ರಸಾರ ಮಾಧ್ಯಮಗಳು ಯಾವತ್ತೂ ನಿಷೇಧಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಭಾಜಪದ ಆಡಳಿತದಲ್ಲಿ ಭಯೋತ್ಪಾದನೆಯ ಕರಿನೆರಳಿನಲ್ಲಿ ಹಿಂದೂಗಳ ಹಬ್ಬಗಳನ್ನು ಆಚರಿಸಬೇಕಾಗುತ್ತದೆ ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಸರಕಾರವು ಜಿಹಾದಿ ಭಯೋತ್ಪಾದನೆಯನ್ನು ಬೇರುಸಹಿತ ನಿರ್ಮೂಲನೆಗೊಳಿಸುವ ಅವಶ್ಯಕತೆಯಿದೆ !

ನವ ದೆಹಲಿ – ಹಬ್ಬಗಳ ಕಾಲಾವಧಿಯಲ್ಲಿ ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನವು ಸಂಚು ರೂಪಿಸಿದೆ ಎಂದು ‘ಟೈಮ್ಸ್ ನೌ’ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.
ಈ ಮಾಹಿತಿಯ ಪ್ರಕಾರ, ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಅಲ್-ಬದ್ರ ಹಾಗೂ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಈ ವಾರದಲ್ಲಿ ಭಾರತೀಯ ಸೈನ್ಯವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಜಮ್ಮು – ಕಾಶ್ಮೀರಕ್ಕೆ ರವಾನಿಸಲಾಗುತ್ತಿದ್ದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯ ಪ್ರಯತ್ನವನ್ನು ೨ ಸಲ ವಿಫಲಗೊಳಿಸಿದೆ.