
‘ನಾವು ದಿನವಿಡಿ ಮಾಡುತ್ತಿರುವ ವಿವಿಧ ಕೃತಿ, ನಮ್ಮ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರ ಹಾಗೂ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದ ನಮ್ಮ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣ ನಿರ್ಮಾಣವಾಗುತ್ತಿರುತ್ತದೆ. ಇದರಿಂದಾಗಿ ಸಾಧಕರು ನಾಮಜಪ (ಉಪಾಯಕ್ಕೆ) ಕುಳಿತಾಗ ಅವರಲ್ಲಿ ತುಂಬಾ ತೊಂದರೆದಾಯಕ ಶಕ್ತಿಗಳ ಆವರಣ ಬಂದಿರುತ್ತದೆ. ಈ ಆವರಣದೊಂದಿಗೆ ಸಾಧಕರು ನಾಮಜಪ ಹಾಗೂ ಪ್ರಾರ್ಥನೆಯನ್ನು ಮಾಡುತ್ತಾರೆ. ಇದರಿಂದ ಸಾಧಕರು ಮಾಡುತ್ತಿರುವ ನಾಮಜಪದ ಅರ್ಧ ಶಕ್ತಿ ಆವರಣ ನಷ್ಟವಾಗಲು ಖರ್ಚಾಗುತ್ತದೆ. ನಂತರ ಸಾಧಕರಿಗೆ ಆ ನಾಮಜಪದ ಲಾಭವು ಕ್ರಮೇಣವಾಗಿ ಸಿಗಲು ಆರಂಭವಾಗುತ್ತದೆ, ಉದಾ. ಅರ್ಧ ಗಂಟೆ ಮಾಡಿದ ನಾಮಜಪದಲ್ಲಿ ೧೫ ನಿಮಿಷಗಳ ನಾಮಜಪವು ಆವರಣ ನಷ್ಟವಾಗಲು ಖರ್ಚಾಗುತ್ತದೆ. ಇದರಿಂದ ಉಪಾಯದ ಫಲನಿಷ್ಪತ್ತಿ ಕಡಿಮೆಯಾಗುತ್ತದೆ; ಆದ್ದರಿಂದ ಸಾಧಕರು ಸೇವೆ ಹಾಗೂ ನಾಮಜಪ ಮಾಡುವಾಗ ಒಂದು ಗಂಟೆಗೊಮ್ಮೆ ೫ ನಿಮಿಷಗಳ ಕಾಲ ಅವರಿಗೆ ಹೇಳಿದ ಪದ್ದತಿಯಂತೆ, ಅಂದರೆ ಊದುಬತ್ತಿ, ನವಿಲು ಗರಿ ಇತ್ಯಾದಿಗಳಿಂದ ಆವರಣ ತೆಗೆಯಬೇಕು ಹಾಗೂ ಸೇವೆ ಅಥವಾ ನಾಮಜಪವನ್ನು ಆರಂಭಿಸಬೇಕು. – (ಪರಾತ್ಪರ ಗುರು) ಡಾ. ಆಠವಲೆ
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !