ನೆರೂಲ್ (ನವಿ ಮುಂಬಯಿ): ಹಾಸ್ಟೆಲ್‌ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!

ಹಾಸ್ಟೆಲ್ ಕೋಣೆಯಲ್ಲಿನ ದೇವರ ಮನೆ ಪಾದರಕ್ಷೆಗಳ ಕಪಾಟಿನ ಬಳಿ ಎಸೆಯಲಾದ ಮೂರ್ತಿಗಳು

ನವಿ ಮುಂಬಯಿ – ನೆರೂಲ್ (ಪಶ್ಚಿಮ) ನ ಸೆಕ್ಟರ್ 6 ರಲ್ಲಿರುವ ‘ಶುಶ್ರೂಷಾ ಹಾರ್ಟ್ ಕೇರ್ ಸೆಂಟರ್ ಆಂಡ್ ಸ್ಪೆಷಾಲಿಟಿ ಹಾಸ್ಪಿಟಲ್’ನ ಹಾಸ್ಟೆಲ್ ಕೋಣೆಯಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಮತಾಂತರಗೊಂಡ ಕ್ರಿಶ್ಚಿಯನ್ ಯುವತಿಯೊಬ್ಬಳು ಎಸೆದು ಹಾಕಿದ್ದಾಳೆ. (ಮತಾಂತರಗೊಂಡ ಕ್ರಿಶ್ಚಿಯನ್ನರು ಪೋಪ್‌ಗಿಂತಲೂ ಹೆಚ್ಚು ಕಠಿಣ ನಿಲುವಿನವರಾಗಿರುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ! – ಸಂಪಾದಕರು). ಈ ಗಂಭೀರ ಪ್ರಕರಣವನ್ನು ಪರಿಗಣಿಸಿ, ಸಂಬಂಧಪಟ್ಟ ಕ್ರಿಶ್ಚಿಯನ್ ಯುವತಿಯನ್ನು ಆಸ್ಪತ್ರೆ ಮತ್ತು ಹಾಸ್ಟೆಲ್‌ನಿಂದ ಅಮಾನತುಗೊಳಿಸಬೇಕೆಂದು ಹಿಂದೂ ಯುವತಿಯು ಆಸ್ಪತ್ರೆಯ ಮಾಲೀಕರು ಮತ್ತು ವ್ಯವಸ್ಥಾಪಕರಲ್ಲಿ ಒತ್ತಾಯಿಸಿದ್ದಾಳೆ. (ದೇವತೆಗಳ ಅವಮಾನದ ವಿರುದ್ಧ ದೂರು ನೀಡಿದ ಧರ್ಮಪ್ರೇಮಿ ಹಿಂದೂ ಯುವತಿಗೆ ಅಭಿನಂದನೆಗಳು! – ಸಂಪಾದಕರು).

(ಈ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)

ಈ ಕುರಿತಾದ ದೂರು ‘ಸನಾತನ ಪ್ರಭಾತ್’ಗೆ ಲಭಿಸಿದೆ. ದೂರಿನ ಪ್ರಕಾರ, ಹಿಂದೂ ಯುವತಿ ವಾಸವಿದ್ದ ಹಾಸ್ಟೆಲ್ ಕೋಣೆಗೆ ನಾಲ್ಕು ದಿನಗಳ ಹಿಂದೆ ಈ ಕ್ರಿಶ್ಚಿಯನ್ ಯುವತಿ ವಾಸಿಸಲು ಬಂದಿದ್ದಳು. ಆ ಕೋಣೆಯಲ್ಲಿದ್ದ ಮರದ ದೇವರ ಮನೆಯಲ್ಲಿ ಶ್ರೀ ಗಣೇಶ, ಶ್ರೀಕೃಷ್ಣ ಮತ್ತು ಶ್ರೀ ವಿಠ್ಠಲನ ಮೂರ್ತಿಗಳಿದ್ದವು. ಹಿಂದೂ ಯುವತಿಯು ಪ್ರತಿದಿನ ಈ ದೇವರಿಗೆ ಪೂಜೆ ಮಾಡುತ್ತಿದ್ದಳು. ಕ್ರಿಶ್ಚಿಯನ್ ಯುವತಿ ಹಾಸ್ಟೆಲ್‌ಗೆ ಬಂದಾಗಿನಿಂದ, ಹಿಂದೂ ದೇವತೆಗಳ ಮೂರ್ತಿಗಳಿಂದ ನನಗೆ ತೊಂದರೆಯಾಗುತ್ತಿದೆ ಎಂದು ಹೇಳಿ, ಕೋಣೆಯಿಂದ ಮೂರ್ತಿಗಳನ್ನು ತೆರವುಗೊಳಿಸುವಂತೆ ಹಿಂದೂ ಯುವತಿಗೆ ಒತ್ತಾಯಿಸುತ್ತಿದ್ದಳು. ಕ್ರಿಶ್ಚಿಯನ್ ಯುವತಿ ಕೋಣೆಗೆ ಬಂದಾಗಿನಿಂದ ನಿರಂತರವಾಗಿ ಈ ಬಗ್ಗೆ ಜಗಳವಾಡುತ್ತಿದ್ದಳು. ಹಿಂದೂ ಯುವತಿ ಮತ್ತು ಆ ಕ್ರಿಶ್ಚಿಯನ್ ಯುವತಿ ಇಬ್ಬರೂ ಇದೇ ಆಸ್ಪತ್ರೆಯಲ್ಲಿ ದಾದಿಯರಾಗಿ (ನರ್ಸ್) ಕೆಲಸ ಮಾಡುತ್ತಿದ್ದಾರೆ. ಜೂನ್ 5 ರಂದು ಹಿಂದೂ ಯುವತಿ ಆಸ್ಪತ್ರೆಗೆ ಕೆಲಸಕ್ಕೆ ಹೋದಾಗ, ಕ್ರಿಶ್ಚಿಯನ್ ಯುವತಿಯು ಹಿಂದೂ ದೇವತೆಗಳ ಮೂರ್ತಿಗಳನ್ನು ಕೋಣೆಯಿಂದ ಹೊರಗೆ ಕಸದ ಬುಟ್ಟಿಯ ಬಳಿ, ಪಾದರಕ್ಷೆಗಳನ್ನು ಇಡುವ ಕಪಾಟಿನ ಜಾಗದಲ್ಲಿ ಎಸೆದಿದ್ದಾಳೆ. ಹಿಂದೂ ಯುವತಿ ಕೋಣೆಗೆ ಹಿಂತಿರುಗಿ ಬಂದು ಮೂರ್ತಿಗಳನ್ನು ಎಸೆದ ಬಗ್ಗೆ ಪ್ರಶ್ನಿಸಿದಾಗ, ಕ್ರಿಶ್ಚಿಯನ್ ಯುವತಿ ಜಗಳವಾಡಿದ್ದಾಳೆ. ಈ ಕ್ರಿಶ್ಚಿಯನ್ ಯುವತಿಯು ಆಸ್ಪತ್ರೆಯಲ್ಲೂ ಕ್ರಿಶ್ಚಿಯನ್ನರನ್ನು ಹೊರತುಪಡಿಸಿ ಇತರ ಧರ್ಮದವರೊಂದಿಗೆ ತಾರತಮ್ಯದಿಂದ ವರ್ತಿಸುತ್ತಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಪಾದಕೀಯ ನಿಲುವು

ಸರ್ವಧರ್ಮ ಸಮಭಾವದ ಗುಣಗಾನ ಮಾಡುವ ಕ್ರಿಶ್ಚಿಯನ್ನರ ಹಿಂದೂ ದ್ವೇಷ ಎಷ್ಟು ಪರಮಾವಧಿಗೆ ತಲುಪಿದೆ ಎಂಬುದು ಇದರಿಂದಲೇ ತಿಳಿಯುತ್ತದೆ. ಕ್ರಿಶ್ಚಿಯನ್ ಸಂಸ್ಥೆಗಳು, ಚರ್ಚ್‌ಗಳು, ಅಲ್ಲಿನ ಪಾದ್ರಿಗಳು ಮತ್ತು ಕ್ರಿಶ್ಚಿಯನ್ ಧರ್ಮಪ್ರಚಾರಕರು ಹಿಂದೂ ದೇವತೆಗಳ ಬಗ್ಗೆ ಎಷ್ಟು ದ್ವೇಷ ಹರಡುತ್ತಿರಬಹುದು ಎಂಬುದನ್ನು ಹಿಂದೂಗಳು ಗಮನಿಸಬೇಕು. ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದುತ್ವನಿಷ್ಠ ಸರಕಾರಗಳಿದ್ದರೂ ಸಹ, ಹಿಂದೂಗಳಿಗೆ ಇತರ ಧರ್ಮದವರಿಂದ ಇಂತಹ ದ್ವೇಷಪೂರಿತ ನಡವಳಿಕೆ ಎದುರಾಗುತ್ತಿರುವುದು ಅತ್ಯಂತ ಆಕ್ರೋಶದ ಸಂಗತಿಯಾಗಿದೆ!