ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ಸತ್ಯವೇ ಚಿರಂತನವಾಗಿರುತ್ತದೆ. ಧರ್ಮಶಾಸ್ತ್ರದಲ್ಲಿ ಸಿದ್ಧಾಂತಗಳು ಯುಗಾನುಯುಗಗಳಿಂದಲೂ ಹಾಗೆಯೇ ಇವೆ. ಅದರಲ್ಲಿ ಬದಲಾವಣೆಗಳನ್ನು ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ತದ್ವಿರುದ್ಧ ವಿಜ್ಞಾನದ ಸಿದ್ಧಾಂತಗಳು ಕೆಲವೇ ವರ್ಷಗಳಲ್ಲಿ ಬದಲಾಗುತ್ತವೆ; ಏಕೆಂದರೆ ವಿಜ್ಞಾನಕ್ಕೆ ಅಂತಿಮ ಸತ್ಯವನ್ನು ಹೇಳಲು ಸಾಧ್ಯವಿಲ್ಲ. ಅಂತಹ ವಿಜ್ಞಾನವನ್ನು ಅಧ್ಯಾತ್ಮಕ್ಕಿಂತ ಶ್ರೇಷ್ಠ ಎಂದು ತಿಳಿಯುವುದಕ್ಕಿಂತ ದೊಡ್ಡ ಅಜ್ಞಾನದ ಬೇರೆ ಉದಾಹರಣೆಯೇ ಇಲ್ಲ. ತಾತ್ಪರ್ಯ, ವಿಜ್ಞಾನದ ಸಂಶೋಧನೆಗೆ ಅಧ್ಯಾತ್ಮಶಾಸ್ತ್ರವು ಮನ್ನಣೆ ನೀಡಿದರೆ ಮಾತ್ರ ಅದನ್ನು ಸತ್ಯವೆಂದು ತಿಳಿಯಬೇಕು, ಎಂಬುದನ್ನು ಗಮನದಲ್ಲಿಡಿರಿ !

‘ಭಾರತದಲ್ಲಿ ‘ಭಾರತರತ್ನ ಸರ್ವೋಚ್ಚ ಸ್ಥಾನವಾಗಿದೆ. ಜಗತ್ತಿನಲ್ಲಿ ‘ನೋಬೆಲ್ ಪ್ರೈಸ್ ಸರ್ವೋಚ್ಚ ಸ್ಥಾನವಾಗಿದ್ದರೆ, ಸನಾತನವು ಘೋಷಿಸುತ್ತಿರುವ ‘ಜನ್ಮ-ಮೃತ್ಯುಗಳಿಂದ ಮುಕ್ತರು ಮತ್ತು ‘ಸಂತರು ಎಂಬ ಸ್ಥಾನಗಳು ಈಶ್ವರನ ವಿಶ್ವದಲ್ಲಿ ಎಲ್ಲಕ್ಕಿಂತ ಮಹತ್ವದ್ದಾಗಿದೆ !

ಪ್ರತಿಯೊಂದು ಪೀಳಿಗೆಯ ಕರ್ತವ್ಯ !

ಪ್ರತಿಯೊಂದು ಪೀಳಿಗೆಯು ಮುಂದಿನ ಪೀಳಿಗೆಯತ್ತ ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಸಂದರ್ಭದಲ್ಲಿ ಆಪೇಕ್ಷೆಯಿಂದ ನೋಡುತ್ತದೆ. ಅದರ ಬದಲು ಪ್ರತಿಯೊಂದು ಪೀಳಿಗೆಯು ‘ನಾವು ಏನು ಮಾಡಬಹುದು ?, ಎಂಬ ವಿಚಾರವನ್ನು ಮಾಡಿ ಹೇಗೆ ಕಾರ್ಯ ಮಾಡಬೇಕೆಂದರೆ ಮುಂದಿನ ಪೀಳಿಗೆಗೆ ಆ ಬಗ್ಗೆ ಏನೂ ಮಾಡುವ ಆವಶ್ಯಕತೆಯೇ ಉಳಿಯಬಾರದು, ಇದರಿಂದ ಆ ಪೀಳಿಗೆಯು ಎಲ್ಲ ಸಮಯವನ್ನು ಸಾಧನೆಗಾಗಿ ನೀಡಬಹುದು ! – (ಪರಾತ್ಪರ ಗುರು) ಡಾ. ಆಠವಲೆ