೧. ಯಾರು ಜೀವಂತ ಇದ್ದಾರೆ ? ಜ್ಞಾನವಂತನು ಜೀವಂತವಾಗಿದ್ದಾನೆ.
೨. ಯಾರು ಸುಖವಾಗಿದ್ದಾರೆ ? ವಾಸನೆ ಮತ್ತು ಕಾಮನೆರಹಿತ ತ್ಯಾಗಿ ಮನುಷ್ಯನು ಸುಖವಾಗಿದ್ದಾನೆ.
೩. ಉತ್ತಮವಾದ ದಯೆ ಯಾವುದು ? ಎಲ್ಲ ಪ್ರಾಣಿಗಳು ಸುಖವಾಗಿಡುವುದು.
೪. ಉತ್ತಮ ಧನ ಯಾವುದು ? ಸಂತೋಷ(ಆನಂದ) ಉತ್ತಮ ಧನವಿದೆ.
೫. ಉತ್ತಮ ಮಾರ್ಗ ಯಾವುದು ? ಸಕಲ ದುಃಖಗಳಿಂದ ಮುಕ್ತಿ ನೀಡುವ ಮಾರ್ಗವೇ ಉತ್ತಮ ಮಾರ್ಗವಾಗಿದೆ.
೬. ದುಃಖ ಯಾವುದು ? ದುಷ್ಟರ ಸಹವಾಸವೇ ಜೀವನದಲ್ಲಿ ನಿಜವಾದ ದುಃಖವಾಗಿದೆ.
೭. ಹಾನಿ ಯಾವುದು ? ‘ಆತ್ಮವನ್ನು ತಿಳಿಯದಿರುವುದು’, ಇದೇ ನಿಜವಾದ ಹಾನಿಯಾಗಿದೆ.
೮. ಯಾರು ಶೂರರಿದ್ದಾರೆ ? ಇಂದ್ರಿಯಗಳನ್ನು ಗೆದ್ದವನು ಮತ್ತು ಅಪರಾಧಿಯನ್ನು ಕ್ಷಮಿಸುವವನು ನಿಜವಾದ ಶೂರನು.
೯. ಏನಿದು ಯೋಗ ? ‘ಕರ್ಮದಲ್ಲಿ ಸಾಕ್ಷಿಭಾವ ಇರುವುದು’, ಇದೇ ನಿಜವಾದ ಯೋಗ.
೧೦. ಪಂಡಿತರು ಯಾರು ? ಸಕಲ ಪ್ರಾಣಿಗಳಲ್ಲಿ ಒಬ್ಬನೇ ಪರಮಾತ್ಮನನ್ನು ನೋಡುವವನು ಮತ್ತು ‘ಬಂಧನ ಮತ್ತು ಮೋಕ್ಷ’ ಇವುಗಳಲ್ಲಿನ ವ್ಯತ್ಯಾಸವನ್ನು ತಿಳಿದಿರುವವನೇ, ಅವನೇ ನಿಜವಾದ ಪಂಡಿತನು.
೧೧. ಏನಿದು ಸುಖ ? ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದೋ ಅದು ಸುಖ.
೧೨. ಆನಂದ ಯಾವುದು ? ‘ಯಾವುದು ಇಂದ್ರಿಯಗಳಿಲ್ಲದೇ ಪ್ರಾಪ್ತಿಯಾಗುತ್ತದೆ ಮತ್ತು ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದಿಲ್ಲವೋ, ಅದು ಆನಂದ !
– ಚೈತನ್ಯ (ಸಾಂಕೃತ್ಯ, ೨೮.೫.೨೦೧೨)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !