ಆಪತ್ಕಾಲವು ಸಾಧನೆಗಾಗಿ ಇಷ್ಟಕಾಲವಾಗಿರುವುದರಿಂದ ಸಾಧನೆಯನ್ನು ಪ್ರಾರಂಭಿಸಿ !

‘ಪ್ರಸ್ತುತ ಆಪತ್ತುಗಳ ಕಾಲವು ಕಠಿಣ ವಾಗಿದ್ದರೂ, ಸಾಧನೆಗಾಗಿ ಇದು ಇಷ್ಟಕಾಲವಾಗಿದೆ. ಯಾವ ರೀತಿ, ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಇತ್ಯಾದಿ ಸಂಧಿಕಾಲದಲ್ಲಿ ಸಾಧನೆಯನ್ನು ಮಾಡಿದರೆ ಲಾಭವಾಗುತ್ತದೋ, ಅದೇ ರೀತಿಯ ಲಾಭವು ಸದ್ಯದ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವುದರಿಂದ ಆಗುತ್ತದೆ. ವಿಜ್ಞಾನದಿಂದಾಗಿ ಅಹಂಕಾರ ಹೆಚ್ಚಿರುವ ಸಮಾಜವು ಮನೋ ಧೈರ್ಯವನ್ನು ಬೆಳೆಸಿಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡುವುದು, ಈಶ್ವರನಿಗೆ ಪ್ರಾರ್ಥನೆ ಮಾಡುವುದು, ಯೋಗ ಸಾಧನೆ ಇತ್ಯಾದಿಗಳನ್ನು ಮಾಡಿ ಈಶ್ವರನಿಷ್ಠವಾಗತೊಡಗಿದೆ. ಇದನ್ನು ಆಪತ್ಕಾಲದ ಒಳ್ಳೆಯ ಪರಿಣಾಮವೆಂದೇ ಹೇಳಬಹುದು. ಆದುದರಿಂದ ಈ ಗುರು ಪೂರ್ಣಿಮೆಯಿಂದ ಗುರುತತ್ತ್ವಕ್ಕೆ ಅಥವಾ ಗುರುರೂಪದಲ್ಲಿನ ಸಂತರಿಗೆ ಶರಣಾಗಿ ಯೋಗ್ಯ ಸಾಧನೆ ಪ್ರಾರಂಭಿಸ ಬೇಕು. ಸರ್ವಶಕ್ತಿವಂತ ಈಶ್ವರನಿಗೆ ಅಥವಾ ಈಶ್ವರನ ಸಗುಣ ರೂಪವಾಗಿರುವ ಗುರುಗಳಿಗೆ ಶರಣಾಗದೇ ಆತ್ಮಶಾಂತಿ ಅಥವಾ ಮೋಕ್ಷವು ಲಭಿಸುವುದಿಲ್ಲವೆಂದು, ತಿಳಿಯಿರಿ.’ – ಶ್ರೀ ಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೪.೨೦೨೦)
ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಪಯಣ ಮತ್ತು ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ !
ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ೬೫ ಕಡೆಗಳಲ್ಲಿ ಅದ್ದೂರಿಯಾಗಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ !
ಶ್ರೀಕ್ಷೇತ್ರ ಕಾಂದಳಿ (ಜುನ್ನರ್) ನಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ ಮಂದಿರದಲ್ಲಿ ಗುರುಪೂರ್ಣಿಮಾ ಉತ್ಸಾಹದಿಂದ ಆಚರಣೆ!
ಇಂದೋರ್ (ಮಧ್ಯಪ್ರದೇಶ) ನಲ್ಲಿ ‘ಶ್ರೀ ಸದ್ಗುರು ಅನಂತಾನಂದ ಸಾಯೀಶ ಶೈಕ್ಷಣಿಕ ಏವಂ ಪಾರಮಾರ್ಥಿಕ ಸೇವಾ ಟ್ರಸ್ಟ್’ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಚರಣೆ!
Sanatan Sanstha : ದೇಶಾದ್ಯಂತ 77 ಕಡೆಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಕ್ತಿಪೂರ್ವಕ ವಾತಾವರಣದಲ್ಲಿ ಆಚರಣೆ!
ಹಿಂದೂಗಳೇ, ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸ್ವರಕ್ಷಣೆಯ ಸಿದ್ಧತೆಯನ್ನು ಮಾಡಿ !