ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಂದ ಜೈಪುರದ ಪ್ರಸಿದ್ಧ ‘ಖೋಲೆ ಹನುಮಾನ’ಗೆ ಪ್ರಾರ್ಥನೆ !

ಜೈಪುರ (ರಾಜಸ್ಥಾನ) – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ೪ ಜುಲೈ ೨೦೨೬ ರಂದು ಇಲ್ಲಿನ ಪ್ರಸಿದ್ಧ ಖೋಲೆ ಹನುಮಾನ ದೇವಸ್ಥಾನದಲ್ಲಿ ದರ್ಶನ ಪಡೆದರು. ‘ಹಿಂದೂ ರಾಷ್ಟ್ರವು ಶೀಘ್ರದಲ್ಲೇ ಸ್ಥಾಪನೆಯಾಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ಲಭಿಸಲಿ, ಹಾಗೆಯೇ ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲಿ’ ಎಂದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಪ್ರಾರ್ಥಿಸಿದರು.

ವೈಶಿಷ್ಟ್ಯಪೂರ್ಣ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಈ ಖೋಲೆ ಹನುಮಾನ್ ದೇವಸ್ಥಾನದಲ್ಲಿ ಹನುಮಂತನ ದರ್ಶನವನ್ನು ಇತರ ಭಕ್ತರು ದರ್ಶನ ಪಡೆಯುವ ಸ್ಥಳದಿಂದಲೇ ಪಡೆಯುತ್ತಿದ್ದರು. ಆಗ ಅಲ್ಲಿನ ಅರ್ಚಕರಿಗೆ ‘ಇವರು ಯಾರೋ ಶ್ರೇಷ್ಠ ಆಧ್ಯಾತ್ಮಿಕ ಅಧಿಕಾರಿಯಾಗಿದ್ದಾರೆ ಎಂದು ಅನಿಸಿತು. ಆದ್ದರಿಂದ ಅವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರನ್ನು ಗರ್ಭಗೃಹದ ಬಳಿಗೆ ಕರೆದೊಯ್ದು ಹನುಮಂತನ ದರ್ಶನ ಮಾಡಿಸಿದರು.