ಭೂಮಿ ಖರೀದಿಯ ವ್ಯವಹಾರದಲ್ಲಿ ವಂಚನೆ ಮಾಡಿದ ಮುಸ್ಲಿಂ ಮಹಿಳೆಯ ಬಂಧನ

ಬಲಾತ್ಕಾರದ ಪ್ರಕರಣದಲ್ಲಿ ಸಿಲುಕಿಸುವ ಮತ್ತು ಜೀವಬೆದರಿಕೆ ಒಡ್ಡಿದ ಆರೋಪ

ಜೀನತ್ ಇಬ್ರಾಹಿಂ ಎಂಬ ಮುಸ್ಲಿಂ ಮಹಿಳೆಯನ್ನು ಬಂಧಿಸಲಾಯಿತು.

ಉಡುಪಿ – ರಿಯಲ್ ಎಸ್ಟೇಟ್‌ ನಲ್ಲಿ ಹೂಡಿಕೆ ಮಾಡುವ ಆಮಿಷ ತೋರಿಸಿ ೭೦ ಲಕ್ಷ ರೂಪಾಯಿಗಳ ವಂಚನೆ ಮಾಡಿದ ಹಾಗೂ ಹಣಕ್ಕಾಗಿ ಒತ್ತಡ ಹೇರಿ ಬಲಾತ್ಕಾರದ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ, ಹಾಗೆಯೇ ಜೀವಬೆದರಿಕೆ ಒಡ್ಡಿದ ಆರೋಪದಡಿ ಝೀನತ್ ಇಬ್ರಾಹಿಂ ಎಂಬ ಮುಸ್ಲಿಂ ಮಹಿಳೆಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಈಕೆ ಕಾಪೂ ತಾಲೂಕಿನ ಪಡುಬಿದ್ರೆ ಸಮೀಪದ ಕಾಂಚಿನಡ್ಕ ನಿವಾಸಿಯಾಗಿದ್ದಾಳೆ. ದೂರುದಾರರು ನೀಡಿದ ೭೦ ಲಕ್ಷ ರೂಪಾಯಿ ಹಣವನ್ನು ಈಕೆ ಭೂಮಿ ಖರೀದಿಸುವ ಬದಲು ವೈಯಕ್ತಿಕ ಕೆಲಸಗಳಿಗಾಗಿ ಬಳಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.

ದೂರುದಾರರು ಹೂಡಿಕೆಗಾಗಿ ನೀಡಿದ ಹಣವನ್ನು ಮರಳಿ ಕೇಳಿದಾಗ, ಝೀನತ್ ಇನ್ನು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಹಾಗೂ ಹಣ ನೀಡದಿದ್ದರೆ ಅವರ ಖಾಸಗಿ ವೀಡಿಯೊಗಳನ್ನು ಪ್ರಸಾರ ಮಾಡುವುದಾಗಿ ಮತ್ತು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯವು ಆಕೆಗೆ ೫ ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಇದೇ ರೀತಿ ವಂಚನೆಗೊಳಗಾದ ನಾಗರಿಕರು ದೂರು ನೀಡಲು ಮುಂದೆ ಬರುವಂತೆ ಪೊಲೀಸರು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ವಂಚನೆ, ಗೂಂಡಾಗಿರಿ, ಮತಾಂತರದಂತಹ ಎಲ್ಲಾ ಅಪರಾಧಗಳಲ್ಲಿ ಮುಸಲ್ಮಾನ್ ಪುರುಷರೊಂದಿಗೆ ಮುಸ್ಲಿಂ ಮಹಿಳೆಯರೂ ಮುಂಚೂಣಿಯಲ್ಲಿರುತ್ತಾರೆ, ಎಂಬುದನ್ನು ತಿಳಿಯಿರಿ !