ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆ;

ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) – ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರದ ವಿರುದ್ಧದ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ. ಜುಲೈ 2 ರಂದು ಈ ಆಂದೋಲನದ 24ನೇ ದಿನದಂದು ರಾವಲಕೋಟ್ನ ಈದ್ಗಾ ಮೈದಾನದಲ್ಲಿ ಸುಮಾರು 80,000 ಜನರು ಜಮಾಯಿಸಿದ್ದರು. ಪಾಕಿಸ್ತಾನ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಪುನರುಚ್ಚರಿಸಿದರು. ‘ಸಂಯುಕ್ತ ಅವಾಮಿ ಆಕ್ಷನ್ ಕಮಿಟಿ’ಯ ಮುಖ್ಯಸ್ಥ ಸರ್ದಾರ್ ಅಮಾನ್ ಖಾನ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುವಾಗ ಪಾಕಿಸ್ತಾನಿ ಸೇನೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕಾಶ್ಮೀರಿಗಳಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಾಕಿಸ್ತಾನಿ ಸೇನೆಯೇ ನೀಡಿತ್ತು; ಆದರೆ ಈಗ ಅಲ್ಲಿನ ಜನರನ್ನು ಪಾಕ್ ‘ಭಯೋತ್ಪಾದಕರು’ ಎಂದು ಕರೆಯುತ್ತಿದೆ ಎಂದರು.
ಫೆಬ್ರವರಿ 2025 ರಲ್ಲಿ ರಾವಲಕೋಟ್ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯು ಮೆರವಣಿಗೆಯನ್ನು ನಡೆಸಿತ್ತು ಎಂದು ಅಮಾನ್ ಖಾನ್ ತಿಳಿಸಿದರು. ಈ ಮೆರವಣಿಗೆಯಲ್ಲಿ ಬಹಿರಂಗವಾಗಿ ಜನರು ಎಕೆ-47 ರೈಫಲ್ಗಳು ಮತ್ತು ಕತ್ತಿಗಳನ್ನು ಹಿಡಿದು ಭಾಗವಹಿಸಿದ್ದರು. ರಾವಲಕೋಟ್ನ ಅಂದಿನ ಉಪ ಆಯುಕ್ತ(ಡಿಸಿ) ಈ ಮೆರವಣಿಗೆಗೆ ಅನುಮತಿ ನೀಡಿದ್ದಷ್ಟೇ ಅಲ್ಲದೆ, ಭದ್ರತೆಯನ್ನೂ ಒದಗಿಸಿದ್ದರು. ಮೊದಲು ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆ ನಡೆಸಲು ಬಿಟ್ಟು, ಈಗ ನಮ್ಮನ್ನು ‘ಭಯೋತ್ಪಾದಕರು’ ಎನ್ನಲಾಗುತ್ತಿದೆ .
ಪಾಕಿಸ್ತಾನದಿಂದ ಸಂಪೂರ್ಣವಾಗಿ ಬೇರ್ಪಡುವ ಬೇಡಿಕೆಯ ಹಂತಕ್ಕೆ ಈ ಪ್ರತಿಭಟನೆ ತಲುಪಬಹುದು!
ನಮ್ಮ ಈ ಆಂದೋಲನವು 38 ಪ್ರಮುಖ ಬೇಡಿಕೆಗಳಿಗಾಗಿ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. ಸರಕಾರವು ಈ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸದಿದ್ದರೆ, ಈ ಆಂದೋಲನವು ಕೇವಲ ಸುಧಾರಣೆಗಳಿಗೆ ಸೀಮಿತವಾಗಿರದೆ, ಪಾಕಿಸ್ತಾನದಿಂದ ಸಂಪೂರ್ಣವಾಗಿ ಬೇರ್ಪಡುವ (ಸ್ವಾತಂತ್ರ್ಯದ) ಬೇಡಿಕೆಯ ಹಂತಕ್ಕೆ ತಲುಪಬಹುದು ಎಂದು ಅಮಾನ್ ಖಾನ್ ಎಚ್ಚರಿಸಿದ್ದಾರೆ.
ಭಾರತದೊಂದಿಗೆ ಮಾತುಕತೆಯ ಬಗ್ಗೆಯೂ ಚರ್ಚೆ
ಸಭೆಯಲ್ಲಿದ್ದ ಕೆಲವು ಭಾಷಣಕಾರರು ಪಾಕಿಸ್ತಾನದ ನಿಯಂತ್ರಣವನ್ನು ತಿರಸ್ಕರಿಸುತ್ತಾ, ಭಾರತದೊಂದಿಗೆ ಮಾತುಕತೆ ಹೆಚ್ಚಿಸುವ ಅಗತ್ಯವನ್ನು ವ್ಯಕ್ತಪಡಿಸಿದರು. ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಮತ್ತು ಈ ಪ್ರದೇಶದ ಅಗತ್ಯ ಪಾಕಿಸ್ತಾನಕ್ಕೆ ಹೆಚ್ಚಿದೆಯೇ ಹೊರತು ಇಲ್ಲಿನ ಜನರಿಗಲ್ಲ ಎಂದು ಅಮಾನ್ ಖಾನ್ ಹೇಳಿದರು.
ವಿದೇಶಿ ಮೂಲದ ಜನರಿಂದಲೂ ಬೆಂಬಲ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ವಿದೇಶಗಳಲ್ಲಿ ವಾಸಿಸುತ್ತಿರುವ ಜನರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಹಲವು ದೇಶಗಳಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗಿದೆ. ಇದರಿಂದಾಗಿ ಈ ಆಂದೋಲನವು ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯ ವಿಷಯವಾಗುತ್ತಿದೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman