ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಸಂಘರ್ಷದ ಮತ್ತೊಂದು ಪರಿಣಾಮ
ರಕ್ಷಣಾ ಸಚಿವರು ಹೆಸರು ಬದಲಿಸುವ ಸುಳಿವು ನೀಡಿದ್ದಾರೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತವನ್ನು ದ್ವೇಷಿಸುವ ಪಾಕಿಸ್ತಾನಕ್ಕೆ ಯಾವುದೇ ಸ್ವತಂತ್ರ ಇತಿಹಾಸವಿಲ್ಲ. ಆದ್ದರಿಂದ, ಅದು ಇಸ್ಲಾಂನ ಬಲದ ಮೇಲೆ ಅಫ್ಘಾನಿ ಮತ್ತು ಟರ್ಕಿ ಆಕ್ರಮಣಕಾರರ ಹೆಸರುಗಳನ್ನು ತನ್ನ ಕ್ಷಿಪಣಿಗಳಿಗಾಗಿ ಬಳಸುತ್ತಾ ಬಂದಿದೆ. ಉದಾಹರಣೆಗೆ ಘೋರಿ, ಅಬ್ದಾಲಿ, ಗಜನಿ ಇತ್ಯಾದಿ. ಆದಾಗ್ಯೂ, ಈಗ ಅಫ್ಘಾನಿಸ್ತಾನದೊಂದಿಗೆ ಅದರ ಸಂಬಂಧವು ಹದಗೆಟ್ಟಿದೆ. ಆದ್ದರಿಂದ, ಪಾಕಿಸ್ತಾನದ ವಿವಿಧ ವಲಯಗಳಲ್ಲಿ ಅಫ್ಘಾನಿ ಆಕ್ರಮಣಕಾರರ ಹೆಸರುಗಳನ್ನು ಕ್ಷಿಪಣಿಗಳಿಗೆ ನೀಡಿರುವ ಬಗ್ಗೆ ಬಹಿರಂಗವಾಗಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಕ್ಷಿಪಣಿಗಳ ಹೆಸರುಗಳನ್ನು ಬದಲಿಸುವ ಸುಳಿವು ನೀಡಿದ್ದಾರೆ.
ರಕ್ಷಣಾ ಸಚಿವ ಖ್ವಾಜಾ ಆಸಿಫ್ ಏನು ಹೇಳಿದರು?
1. ಆಸಿಫ್ ಅವರು ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸುತ್ತಾ, ಪಾಕಿಸ್ತಾನವು ತನ್ನ ಕ್ಷಿಪಣಿಗಳಿಗೆ ಅಫ್ಘಾನಿ ನಾಯಕರ ಹೆಸರನ್ನು ಇಟ್ಟಿದೆ. ಈ ಹೆಸರುಗಳನ್ನು ಈಗ ಬದಲಾಯಿಸಬೇಕು; ಏಕೆಂದರೆ ಇದರಲ್ಲಿನ ಹೆಚ್ಚಿನ ಐತಿಹಾಸಿಕ ವ್ಯಕ್ತಿಗಳು ಆಕ್ರಮಣಕಾರರು ಮತ್ತು ಲೂಟಿಕೋರರಾಗಿದ್ದರು, ಅವರು ಪಾಕಿಸ್ತಾನದ ಭೂಮಿಯ ಮೇಲೆ ಕೇವಲ ವಿನಾಶವನ್ನೇ ಉಂಟುಮಾಡಿದರು. (ಹೆಸರುಗಳನ್ನು ಇಡುವಾಗ ಪಾಕಿಸ್ತಾನಕ್ಕೆ ಈ ಇತಿಹಾಸ ತಿಳಿದಿರಲಿಲ್ಲವೇ? – ಸಂಪಾದಕರು)
2. ನಾನು ಮಹಮೂದ್ ಗಜನಿವಿಯನ್ನು ನಾಯಕ ಎಂದು ಪರಿಗಣಿಸುವುದಿಲ್ಲ. ಅವನು ಕಳ್ಳ ಮತ್ತು ದರೋಡೆಕೋರನಾಗಿದ್ದನು. ಅವನು ಅಫ್ಘಾನಿಸ್ತಾನದಿಂದ ಬರುತ್ತಿದ್ದನು, ಭಾರತವನ್ನು ಲೂಟಿ ಮಾಡುತ್ತಿದ್ದನು ಮತ್ತು ವಾಪಸ್ ಹೋಗುತ್ತಿದ್ದನು. ನಾವು ಅವನನ್ನು ನಾಯಕನನ್ನಾಗಿ ಮಾಡಿದ್ದೇವೆ, ಆದರೆ ನಾನು ಅವನನ್ನು ಗೌರವಿಸುವುದಿಲ್ಲ.
3. ಭಾರತದ ಸೋಮನಾಥ ದೇವಾಲಯದ ಮೇಲಿನ ದಾಳಿಯ ಸಮಯದಲ್ಲಿ, ಗಜನಿವಿಯು ಮುಲ್ತಾನ್ನಲ್ಲಿ ವಾಸಿಸುತ್ತಿದ್ದ ಸಾವಿರಾರು ಇಸ್ಮಾಯಿಲಿ ಮುಸ್ಲಿಮರನ್ನು ಕೊಂದನು. ಗಜನಿವಿ ಮತ್ತು ಅಬ್ದಾಲಿಯಂತಹ ಜನರ ಹೆಸರನ್ನು ಕ್ಷಿಪಣಿಗಳಿಗೆ ನೀಡಿರುವುದನ್ನು ಬದಲಾಯಿಸುವ ಸಮಯ ಈಗ ಬಂದಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ