‘ಭಾರತ ನೀರು ತಡೆದರೆ ಪರಮಾಣು ಯುದ್ಧ’ : Pakistan Nuclear War Warning

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತವು ರದ್ದುಗೊಳಿಸಿದ ಪ್ರಕರಣ

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ರಂ ದಸ್ತಗಿರ್ ಖಾನ್

ಇಸ್ಲಾಮಾಬಾದ (ಪಾಕಿಸ್ತಾನ) – ಒಂದು ವೇಳೆ ಭಾರತದ ಪ್ರಧಾನಮಂತ್ರಿಯವರು ಪಾಕಿಸ್ತಾನಕ್ಕೆ ಬರುವ ನೀರನ್ನು ಬಂದ್ ಮಾಡಿದರೆ, ನಾವು ಅದನ್ನು ಎಂದಿಗೂ ಸಹಿಸುವುದಿಲ್ಲ. ಭಾರತವು ನೀರನ್ನು ತಡೆದರೆ ಮತ್ತು ಜಗತ್ತು ಇದರಲ್ಲಿ ಮಧ್ಯಸ್ಥಿಕೆ ವಹಿಸದಿದ್ದರೆ, ಬಹುಶಃ ಇದು ನೀರಿಗಾಗಿ ನಡೆಯುವ ಜಗತ್ತಿನ ಮೊದಲ ಪರಮಾಣು ಯುದ್ಧವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯ ರಾಷ್ಟ್ರಗಳಾಗಿವೆ.

ನಾವು ಪರಸ್ಪರ ಎಷ್ಟು ಹತ್ತಿರವಾಗಿದ್ದೇವೆ ಎಂದರೆ, ಒಮ್ಮೆ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಯೋಚಿಸಲು ಕೂಡ ಸಮಯ ಉಳಿಯುವುದಿಲ್ಲ. ಪರಿಸ್ಥಿತಿಯು ಪರಮಾಣು ಯುದ್ಧದವರೆಗೆ ತಲುಪಬಹುದು ಮತ್ತು ಹಾಗಾದಲ್ಲಿ ಪಾಕಿಸ್ತಾನವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಪಾಕಿಸ್ತಾನದ ಮಾಜಿ ರಕ್ಷಣಾ ಮತ್ತು ವಿದೇಶಾಂಗ ಸಚಿವ ಖುರ್ರಮ್ ದಸ್ತಗೀರ ಖಾನ್ ಅವರು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತವು ರದ್ದುಗೊಳಿಸಿದ ಕುರಿತು ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡುವಾಗ ಬೆದರಿಕೆ ಹಾಕಿದ್ದಾರೆ.

ಸಂಪಾದಕೀಯ ನಿಲುವು

‘ಪಾಕಿಸ್ತಾನದ ಬಳಿ ಇರುವ ಪರಮಾಣು ಬಾಂಬ್‌ ಗಳು ಸ್ಫೋಟಗೊಳ್ಳಲು ಸಾಧ್ಯವಿದೆಯೇ ?’, ಎಂಬ ಪ್ರಶ್ನೆ ಜಗತ್ತಿನ ಮುಂದಿದೆ. ಒಂದು ವೇಳೆ ಪಾಕಿಸ್ತಾನಕ್ಕೆ ಪರಮಾಣು ಯುದ್ಧದ ಅಷ್ಟೊಂದು ಹಂಬಲವಿದ್ದರೆ, ಅದನ್ನೊಮ್ಮೆ ಮಾಡಿಯೇ ನೋಡಬೇಕು !