ಧುಳೆ – ಪುಂಡರಿಂದ ಪೊಲೀಸರಿಗೆ ಒದೆ ಮತ್ತು ಹಲ್ಲೆ: 3 ಆರೋಪಿಗಳ ಬಂಧನ!

ಬಂಧಿತ ಆರೋಪಿಗಳು

ಧುಳೆ – ಗ್ರಾಮೀಣ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಪುಂಡರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ಸಾಕ್ರಿ ತಾಲೂಕಿನ ಜೈತಾನೆಯಲ್ಲಿ ನಡೆದಿದೆ. ಈ ಹಲ್ಲೆ ಮತ್ತು ನೂಕುನುಗ್ಗಾಟದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ನಿಜಾಮ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 3 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ಒಬ್ಬ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.

1. ಗ್ರಾಮೀಣ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಕೆಲವರು ತಮ್ಮಲ್ಲೇ ಜಗಳವಾಡುತ್ತಿದ್ದರು. ಇದನ್ನು ತಿಳಿದು ಪೊಲೀಸರು ಸ್ಥಳಕ್ಕೆ ಬಂದು ‘ಜಗಳವಾಡಬೇಡಿ’ ಎಂದು ಹೇಳಿದ್ದರು.

2. ಈ ವೇಳೆ ಸಂಶಯಿತರು ಪೊಲೀಸರೊಂದಿಗೇ ವಾಗ್ವಾದಕ್ಕಿಳಿದರು. ‘ನಾವು ನಿಮ್ಮನ್ನು ವರ್ಗಾವಣೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕುತ್ತಾ ಪೊಲೀಸರ ಮೇಲೆ ಹಲ್ಲೆ ನಡೆಸಿದರು.

ಸಂಪಾದಕೀಯ ನಿಲುವು

ಸ್ವತಃ ರಕ್ಷಿಸಿಕೊಳ್ಳಲಾಗದ ಪೊಲೀಸರು ಪುಂಡರಿಂದ ಜನತೆಯನ್ನು ಹೇಗೆ ರಕ್ಷಿಸುತ್ತಾರೆ?