ಈಗ ತೃಣಮೂಲದ ಮಾಜಿ ಶಾಸಕ ರಾಮೇಂದು ರಾಯ್ ಅವರ ಮನೆಯ ಬಳಿ ಸರಕಾರಿ ಸಾಮಗ್ರಿಗಳ ಸಂಗ್ರಹ ಪತ್ತೆ!

  • ದೊಣ್ಣೆ ಮತ್ತು ಲಾಠಿಗಳೂ ಜಪ್ತಿ

  • ಭಯೋತ್ಪಾದನೆ ಹರಡಲು ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ ಎಂದು ಭಾಜಪ ಆರೋಪ

ಮಾಜಿ ಶಾಸಕ ರಾಮೇಂದು ರಾಯ್

ಕೊಲಕಾತಾ (ಬಂಗಾಳ) – ಇಲ್ಲಿನ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕ ರಾಮೇಂದು ಸಿಂಹ ರಾಯ್ ಅವರ ನಿವಾಸದ ಸಮೀಪವಿರುವ ಕಾಲೇಜೊಂದರ ಆವರಣದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಸರಕಾರಿ ಪರಿಹಾರ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸರಿಗೆ ದೊಣ್ಣೆ ಮತ್ತು ಲಾಠಿಗಳ ಸಂಗ್ರಹವೂ ಪತ್ತೆಯಾಗಿದೆ. ಈ ಘಟನೆಯ ನಂತರ, ಭಾಜಪ ಶಾಸಕ ಸಂತು ಪಾನ್ ಅವರು ಜಪ್ತಿ ಮಾಡಲಾದ ಲಾಠಿಗಳು ಸಾಮಾನ್ಯ ಬಳಕೆಯದ್ದಲ್ಲ, ಬದಲಿಗೆ ಅವುಗಳನ್ನು ನಡುಕ ಹುಟ್ಟಿಸಲು ಅಥವಾ ಹಿಂಸಾಚಾರಕ್ಕಾಗಿ ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಪರಿಹಾರ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಲು ಯತ್ನಿಸಲಾಗುತ್ತಿತ್ತು ಎಂದೂ ಅವರು ಹೇಳಿದ್ದಾರೆ. ಭಾಜಪವು ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಪೂರ್ವ ವರ್ಧಮಾನ್ ಜಿಲ್ಲೆಯಲ್ಲಿ ನಡೆದ ದಾಳಿಯ ನಂತರ ತೃಣಮೂಲ ಕಾಂಗ್ರೆಸ್ ಶಾಸಕ ತಪನ್ ಚಟರ್ಜಿ ಅವರ ನಿವಾಸದಿಂದ ಟಾರ್ಪಲ, ಕಂಬಳಿಗಳು, ಫುಟ್‌ ಬಾಲ್, ವಾಲಿಬಾಲ್ ಮತ್ತು ಇತರ ಸರಕಾರಿ ಪರಿಹಾರ ಸಾಮಗ್ರಿಗಳನ್ನು ಜಪ್ತಿ ಮಾಡಿ ಅವರನ್ನು ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

  • ಇಂತಹ ಸಮಾಜಘಾತುಕ ಪಕ್ಷವನ್ನು ಕೇಂದ್ರ ಸರಕಾರ ಏಕೆ ನಿಷೇಧಿಸುತ್ತಿಲ್ಲ ?
  • ಈಗ ತೃಣಮೂಲ ಕಾಂಗ್ರೆಸ್ಸಿನ ಹಾಲಿ-ಮಾಜಿ ಶಾಸಕರು ಮತ್ತು ಸಂಸದರು ಸೇರಿದಂತೆ ಎಲ್ಲರನ್ನೂ ಒಟ್ಟಾಗಿ ತನಿಖೆಗೆ ಒಳಪಡಿಸಬೇಕು. ಅವರಲ್ಲಿ ಯಾವ ನಾಯಕರು ನಿರ್ದೋಷಿಗಳೆಂದು ಸಾಬೀತಾಗುತ್ತಾರೋ, ಅಂತಹ ನಾಯಕರ ಬೆಂಬಲವನ್ನು ಮಾತ್ರ ಭಾಜಪ ಸರಕಾರವು ಸಂಸತ್ತಿನಲ್ಲಿ ಅಥವಾ ಶಾಸನಸಭೆಯಲ್ಲಿ ಸ್ವೀಕರಿಸಬೇಕು !