ನುಸುಳುಕೋರರನ್ನು ಸ್ವದೇಶಕ್ಕೆ ಕಳುಹಿಸುವ ಭಾರತದ ಅಭಿಯಾನಕ್ಕೆ ಬಾಂಗ್ಲಾದೇಶದ ವಿರೋಧ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ರಕ್ಷಣೆಗಾಗಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ ಮತ್ತು ಮಾಡುವುದೂ ಇಲ್ಲ. ಜನರನ್ನು ಬಲವಂತವಾಗಿ ಮರಳಿ ಕಳುಹಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ‘ಜಮಾತ್-ಎ-ಇಸ್ಲಾಮಿ’ ಎಂಬ ಉಗ್ರಗಾಮಿ ಸಂಘಟನೆಯ ಸಹಾಯಕ ಪ್ರಧಾನ ಕಾರ್ಯದರ್ಶಿ ಹಮೀದುರ್ ರೆಹಮಾನ್ ಆಜಾದ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. 11 ಇಸ್ಲಾಮಿಕ್ ಪಕ್ಷಗಳನ್ನು ಜೊತೆಗೂಡಿಸಿ ‘ಜಮಾತ್-ಎ-ಇಸ್ಲಾಮಿ’ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.
ಆಜಾದ್ ಮಾತು ಮುಂದುವರೆಸುತ್ತಾ, ಜನರನ್ನು ಬಲವಂತವಾಗಿ ಮರಳಿ ಕಳುಹಿಸುವ ಕ್ರಮಗಳನ್ನು ತಡೆಯಲು ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ವನ್ನು ಮತ್ತಷ್ಟು ಬಲಪಡಿಸಬೇಕು. ಗಡಿ ಪ್ರದೇಶದ ಜನರು ಮಾನವ ಸರಪಳಿ ನಿರ್ಮಿಸಬೇಕು, ಇದರಿಂದಾಗಿ ಭಯೋತ್ಪಾದಕರು, ಕಳ್ಳಸಾಗಣೆದಾರರು ಅಥವಾ ಅಪರಾಧಿಗಳು ಬಾಂಗ್ಲಾದೇಶಕ್ಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಗಡಿಯ 50 ಕ್ಕೂ ಹೆಚ್ಚು ಸ್ಥಳಗಳಿಂದ 2 ಸಾವಿರದ 479 ಜನರನ್ನು ಬಾಂಗ್ಲಾದೇಶಕ್ಕೆ ಬಲವಂತವಾಗಿ ತಳ್ಳುವ ಪ್ರಯತ್ನ ನಡೆಯಿತು ಎಂದು ಆಜಾದ್ ವಾದಿಸಿದ್ದಾರೆ. ಫೆಬ್ರವರಿಯಿಂದ ಇದುವರೆಗೆ ಭಾರತದ ಗಡಿ ಭದ್ರತಾ ಪಡೆಯ ಗುಂಡಿನ ದಾಳಿಯಲ್ಲಿ 19 ಬಾಂಗ್ಲಾದೇಶಿ ನಾಗರಿಕರು ಸಾವನ್ನಪ್ಪಿದ್ದಾರೆ.
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !
ಭಾರತದ ಬಳಿ ನಿರೀಕ್ಷೆಗಿಂತ ತುಂಬಾ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳು ಇರಬಹುದು! – ಪಾಕಿಸ್ತಾನ : India Nuclear Weapons
ಕೆನಡಾ: ಮೂವರು ಸಿಖ್ ವ್ಯಕ್ತಿಗಳಿಗೆ ಜೈಲು ಶಿಕ್ಷೆ
ಇರಾನ್ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ದಿದ್ದರೆ, ಇಸ್ರೇಲ್ನ ಅಸ್ತಿತ್ವವೇ ಇರುತ್ತಿರಲಿಲ್ಲ ! – ಟ್ರಂಪ್
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿಕೆ: ಉಗ್ರರ ಬಳಿ ೨೭ ವಿಧದ ೧ ಸಾವಿರಕ್ಕೂ ಹೆಚ್ಚು ಮಾರಕಾಸ್ತ್ರಗಳು!
ಕೆನಡಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಷೇಧ! : Social Media Ban