‘ಬಾಂಗ್ಲಾದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ!’ – ‘ಜಮಾತ್-ಎ-ಇಸ್ಲಾಮಿ’ : Jamaat-e-Islami

ನುಸುಳುಕೋರರನ್ನು ಸ್ವದೇಶಕ್ಕೆ ಕಳುಹಿಸುವ ಭಾರತದ ಅಭಿಯಾನಕ್ಕೆ ಬಾಂಗ್ಲಾದೇಶದ ವಿರೋಧ!

ಹಮೀದುರ್ ರಹಮಾನ್ ಆಜಾದ್, ಜಮಾತೆ ಇಸ್ಲಾಮಿ ಸಹಾಯಕ ಪ್ರಧಾನ ಕಾರ್ಯದರ್ಶಿ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ರಕ್ಷಣೆಗಾಗಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ ಮತ್ತು ಮಾಡುವುದೂ ಇಲ್ಲ. ಜನರನ್ನು ಬಲವಂತವಾಗಿ ಮರಳಿ ಕಳುಹಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ‘ಜಮಾತ್-ಎ-ಇಸ್ಲಾಮಿ’ ಎಂಬ ಉಗ್ರಗಾಮಿ ಸಂಘಟನೆಯ ಸಹಾಯಕ ಪ್ರಧಾನ ಕಾರ್ಯದರ್ಶಿ ಹಮೀದುರ್ ರೆಹಮಾನ್ ಆಜಾದ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. 11 ಇಸ್ಲಾಮಿಕ್ ಪಕ್ಷಗಳನ್ನು ಜೊತೆಗೂಡಿಸಿ ‘ಜಮಾತ್-ಎ-ಇಸ್ಲಾಮಿ’ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಆಜಾದ್ ಮಾತು ಮುಂದುವರೆಸುತ್ತಾ, ಜನರನ್ನು ಬಲವಂತವಾಗಿ ಮರಳಿ ಕಳುಹಿಸುವ ಕ್ರಮಗಳನ್ನು ತಡೆಯಲು ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ’ವನ್ನು ಮತ್ತಷ್ಟು ಬಲಪಡಿಸಬೇಕು. ಗಡಿ ಪ್ರದೇಶದ ಜನರು ಮಾನವ ಸರಪಳಿ ನಿರ್ಮಿಸಬೇಕು, ಇದರಿಂದಾಗಿ ಭಯೋತ್ಪಾದಕರು, ಕಳ್ಳಸಾಗಣೆದಾರರು ಅಥವಾ ಅಪರಾಧಿಗಳು ಬಾಂಗ್ಲಾದೇಶಕ್ಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಗಡಿಯ 50 ಕ್ಕೂ ಹೆಚ್ಚು ಸ್ಥಳಗಳಿಂದ 2 ಸಾವಿರದ 479 ಜನರನ್ನು ಬಾಂಗ್ಲಾದೇಶಕ್ಕೆ ಬಲವಂತವಾಗಿ ತಳ್ಳುವ ಪ್ರಯತ್ನ ನಡೆಯಿತು ಎಂದು ಆಜಾದ್ ವಾದಿಸಿದ್ದಾರೆ. ಫೆಬ್ರವರಿಯಿಂದ ಇದುವರೆಗೆ ಭಾರತದ ಗಡಿ ಭದ್ರತಾ ಪಡೆಯ ಗುಂಡಿನ ದಾಳಿಯಲ್ಲಿ 19 ಬಾಂಗ್ಲಾದೇಶಿ ನಾಗರಿಕರು ಸಾವನ್ನಪ್ಪಿದ್ದಾರೆ.

ಸಂಪಾದಕೀಯ ನಿಲುವು

ಕಳೆದ 7 ದಶಕಗಳಿಂದ ಬಾಂಗ್ಲಾದೇಶಿ ನುಸುಳುಕೋರರನ್ನು ಭಾರತಕ್ಕೆ ನುಗ್ಗಿಸುವಾಗ ಭಾರತದ ಸಾರ್ವಭೌಮತ್ವವನ್ನು ಹತ್ತಿಕ್ಕಲಾಯಿತು, ಅದರ ಕಥೆಯೇನು? 'ಜಮಾತ್-ಎ-ಇಸ್ಲಾಮಿ'ಯಂತಹ ಸಂಘಟನೆಗಳು ಏನೇ ಹೇಳಲಿ, ಭಾರತವು ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಓಡಿಸಿಯೇ ತೀರುತ್ತದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು!