ಕೊಲೆ ಪ್ರಕರಣದ 72 ವರ್ಷದ ಅಪರಾಧಿಗೆ ಮಧ್ಯಂತರ ಜಾಮೀನು
ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್

ನವದೆಹಲಿ – ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯೊಬ್ಬನ ಮೇಲ್ಮನವಿ ಬರೋಬ್ಬರಿ 41 ವರ್ಷಗಳ ಕಾಲ ಬಾಕಿ ಉಳಿದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ವ್ಯಕ್ತಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಈ ವಿಳಂಬಕ್ಕಾಗಿ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 1983 ರ ವರ್ಷದಲ್ಲಿ ವಿಜಯ ಸಿಂಗ್ ಅವರ ಸಹೋದರನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ 1985 ರಲ್ಲಿ ಕಾನ್ಪುರದ ಸೆಷನ್ಸ್ ನ್ಯಾಯಾಲಯವು ವಿಜಯ ಸಿಂಗ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗ ಅವರಿಗೆ 28 ವರ್ಷ ವಯಸ್ಸಾಗಿತ್ತು. ತದನಂತರ ಸಿಂಗ್ ಅವರು ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದರು (ಮೇಲ್ಮನವಿ ಸಲ್ಲಿಸಿದರು). ಮೇಲ್ಮನವಿ ಬಾಕಿ ಇರುವಾಗಲೇ ಅವರಿಗೆ ಜಾಮೀನು ಸಿಕ್ಕಿತ್ತು. ಅದರ ನಂತರ ಅವರು 4 ದಶಕಗಳ ಕಾಲ ಜಾಮೀನಿನ ಮೇಲೆಯೇ ಹೊರಗಿದ್ದರು.
ಫೆಬ್ರವರಿ 2026 ರಲ್ಲಿ, ಅಂದರೆ 41 ವರ್ಷಗಳ ನಂತರ ಹೈಕೋರ್ಟ್ ಅವರ ಮೇಲ್ಮನವಿಯನ್ನು ವಜಾಗೊಳಿಸಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಹೈಕೋರ್ಟ್ನ ಈ ತೀರ್ಪನ್ನು ಸಿಂಗ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಪ್ರಸ್ತುತ 72 ವರ್ಷ ವಯಸ್ಸಿನ ವಿಜಯ ಸಿಂಗ್ ಅವರು ವಯೋಸಹಜವಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಜಾಮೀನು ಅವಧಿಯಲ್ಲಿ ಅವರ ನಡವಳಿಕೆ ತೃಪ್ತಿಕರವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಇಡೀ ಪ್ರಕರಣದ ದಾಖಲೆಗಳನ್ನು ತರಿಸಿಕೊಂಡು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಗೃಹಿಣಿಯರು ರಾಷ್ಟ್ರ ನಿರ್ಮಾತೃಗಳು! – ಸರ್ವೋಚ್ಚ ನ್ಯಾಯಾಲಯ
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ನಿಯತ್, ನೀತಿ ಮತ್ತು ನಿರ್ಣಯಗಳಿಂದ ದೇಶದ ಅಭಿವೃದ್ಧಿಗೆ ವೇಗ! – ಪ್ರಧಾನಮಂತ್ರಿ : PM Narendra Modi
‘ಶ್ರೀರಾಮನು ದಶರಥನ ಪುತ್ರನಾಗಿರಲಿಲ್ಲ !’ (ಅಂತೆ) : Prof. Bhagwan
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಾಯಕ ನಿಜಾಮ್ ಅಲಿಯಾಸ್ ಇಬ್ರಾಹಿಂ ಬಂಧನ!
ಹಿಂದೂತ್ವನಿಷ್ಠ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಜಾಕೀರ್ಗೆ ಮಧ್ಯಂತರ ಜಾಮೀನು!