ಪಾಕ್ ಆಕ್ರಮಿತ ಕಾಶ್ಮೀರದ ಕಾರ್ಯಕರ್ತನಿಗೆ ಬೆದರಿಕೆ!

ನವದೆಹಲಿ – ಸುದ್ದಿ ವಾಹಿನಿಯೊಂದರ ನೇರ ಪ್ರಸಾರದ ಚರ್ಚೆಯ ವೇಳೆ ಪಾಕಿಸ್ತಾನಿ ಪ್ರತಿನಿಧಿಯೊಬ್ಬರು ಪಿಸ್ತೂಲ್ ಹೊರತೆಗೆದು, ಪಾಕ್ ಆಕ್ರಮಿತ ಕಾಶ್ಮೀರದ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ರಿಪಬ್ಲಿಕ್ ಟಿವಿ’ ಸುದ್ದಿ ವಾಹಿನಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಚರ್ಚಾ ಕಾರ್ಯಕ್ರಮದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪರಿಸ್ಥಿತಿ, ಅಲ್ಲಿನ ನಾಗರಿಕರ ಸಮಸ್ಯೆಗಳು ಮತ್ತು ಭದ್ರತೆಯ ಕುರಿತು ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಪ್ರತಿನಿಧಿ ಮೇಜರ್ ಶೇಖ್ ಎಮ್. ನದೀಮ್ ಅವರಿಗೆ ಭದ್ರತೆ ಮತ್ತು ಗುಪ್ತಚರ ಕಾರ್ಯಾಚರಣೆಗಳ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು.
ಚರ್ಚೆಯ ವೇಳೆ ವಾಗ್ವಾದ ತಾರಕಕ್ಕೇರಿದಾಗ ನದೀಮ್ ಅವರು ಸಂಯಮ ಕಳೆದುಕೊಂಡು, ಕ್ಯಾಮೆರಾ ಮುಂದೆಯೇ ನೇರವಾಗಿ ಪಿಸ್ತೂಲ್ ತೋರಿಸಿ ಪಾಕ್ ಆಕ್ರಮಿತ ಕಾಶ್ಮೀರದ ಕಾರ್ಯಕರ್ತನಿಗೆ ಬೆದರಿಕೆ ಹಾಕಿದರು. ಈ ಅನಿರೀಕ್ಷಿತ ಘಟನೆಯಿಂದಾಗಿ ಚರ್ಚೆಯ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮದ ನಿರೂಪಕ ಅರ್ನಾಬ್ ಗೋಸ್ವಾಮಿ ಅವರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ಚರ್ಚೆಯನ್ನು ಮುಂದುವರಿಸಿದರು. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಇಂತಹ ಕೃತ್ಯಕ್ಕೆ ಇಳಿದಿರುವುದು ಅತ್ಯಂತ ಖಂಡನೀಯ ಎಂದು ಅವರು ಹೇಳಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಹೆಲಿಕಾಪ್ಟರ್ ಪತನ: 21 ಮಂದಿ ಸಾವು!
2030 ರ ವೇಳೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿವೃತ್ತ
ಅಮೆರಿಕಾದಿಂದ ಇರಾನ್ ನ 20 ಸ್ಥಳಗಳ ಮೇಲೆ ದಾಳಿ
ಇಸ್ರೇಲ್ ಮತ್ತು ಇರಾನ್ ನಡುವೆ ಕೆಲವು ಕಾಲದವರೆಗೆ ಪರಸ್ಪರ ದಾಳಿ ನಡೆಸದಿರಲು ಒಪ್ಪಿಗೆ ! – ಡೊನಾಲ್ಡ್ ಟ್ರಂಪ್
ಅಮೆರಿಕ: ‘ಎಚ್-೧ಬಿ ವೀಸಾ’ ಶುಲ್ಕ ರದ್ದುಗೊಳಿಸಿದ ಕೇಂದ್ರ ನ್ಯಾಯಾಲಯ!
ಭಾರತದಿಂದ ಇದೇ ಮೊದಲ ಬಾರಿಗೆ ಕ್ಷಿಪಣಿಗಳ ಮೇಲೆ 12 ‘ಸಕ್ರಿಯ’ ಪರಮಾಣು ಶಸ್ತ್ರಾಸ್ತ್ರಗಳ ನಿಯೋಜನೆ!