‘ಆರ್.ಎಸ್.ಎಸ್. ನೋಂದಣಿಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಂತೆ !’

  • ರಾಜ್ಯದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಎಚ್ಚರಿಕೆ

  • ಖರ್ಗೆ ಅವರ ನೇಮಕಾತಿಯನ್ನು ಭಾಜಪ ಪ್ರಶ್ನಿಸಿದ ಹಿನ್ನೆಲೆಯಲ್ಲಿ ನೀಡಿದ ಹೇಳಿಕೆ

ಪ್ರಿಯಾಂಕ್ ಖರ್ಗೆ

ಬೆಂಗಳೂರು – ‘ರಾಜ್ಯದ ಗೃಹ ಇಲಾಖೆ ಒಬ್ಬ ಅದಕ್ಷ ಸಚಿವನ ಕೈಗೆ ಸಿಲುಕಿದೆ’, ಎಂದು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭಾಜಪ ಟೀಕಿಸಿದೆ. ಇದರಿಂದ ಕೋಪಗೊಂಡ ಖರ್ಗೆ, ನೋಂದಣಿಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೇಳಿ ಎಂದರು !

ಖರ್ಗೆ ಮಾತು ಮುಂದುವರೆಸುತ್ತಾ, ‘ನಾವು ಸಂಘವನ್ನು ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿಲ್ಲ. ಬದಲಾಗಿ ಸಂಘದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು, ಇದಕ್ಕಾಗಿ ನಾವು ಆಗ್ರಹಿಸುತ್ತಿದ್ದೇವೆ’ ಎಂದರು.

ಭಾಜಪದಿಂದ ಖಂಡನೆ !

ಭಾಜಪ ಕಾರ್ಯಕರ್ತರು ಇಂತಹ ಪೊಳ್ಳು ಬೆದರಿಕೆಗಳಿಗೆ ಎಂದಿಗೂ ಹೆದರುವುದಿಲ್ಲ. ಅನೇಕ ಸವಾಲುಗಳನ್ನು ಎದುರಿಸಿ ಇಂದು ಭಾಜಪ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಜಾಗತಿಕ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತವನ್ನು ಅತಿ ಹೆಚ್ಚು ಕಾಲ ಆಳಿದ ಚುನಾಯಿತ ಪ್ರಧಾನಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಭಾಜಪ ತಿರುಗೇಟು ನೀಡಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಂತಹ ಆಡಳಿತವಿರುವ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ನಾಳೆ ಸಂಘವನ್ನು ನಿಷೇಧಿಸಿದರೂ ಆಶ್ಚರ್ಯಪಡಬೇಕಾಗಿಲ್ಲ ! ಅರ್ಥಾತ್ ಇದಕ್ಕೆ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ ಅಲ್ಲಿನ ಹಿಂದೂಗಳೇ ಹೊಣೆ. ಹಿಂದೂಗಳಿಗಾಗಿ ಶ್ರಮಿಸುತ್ತಿರುವ ಸಂಘಟನೆಯ ಬೆಂಬಲಕ್ಕೆ ನಿಲ್ಲುವ ಧರ್ಮಕರ್ತವ್ಯವನ್ನಾದರೂ ಈಗ ಅಲ್ಲಿನ ಹಿಂದೂಗಳು ಪಾಲಿಸಬೇಕು !