ದೆಹಲಿ: ಹಳೇ ವೈಷಮ್ಯದ ಹಿನ್ನೆಲೆ: ೧೭ ವರ್ಷದ ಹಿಂದೂ ಹುಡುಗನ ಹತ್ಯೆ

ನವದೆಹಲಿ – ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ಜೂನ್ ೧ ರಂದು ೧೭ ವರ್ಷದ ಅಭಿಷೇಕ್ ಎಂಬ ಅಪ್ರಾಪ್ತ ಹುಡುಗನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ಘಟನೆಯು ರಾತ್ರಿ ೧೦ ಗಂಟೆಯ ಸುಮಾರಿಗೆ ನಡೆದಿದೆ.

​ಅಭಿಷೇಕ್‌ನ ಕುಟುಂಬದವರು ತಿಳಿಸಿರುವ ಪ್ರಕಾರ, ಕೆಲವು ತಿಂಗಳುಗಳ ಹಿಂದೆ ಅಭಿಷೇಕ್ ಹಾಗೂ ಕೆಲವು ಯುವಕರ ನಡುವೆ ಜಗಳ ನಡೆದಿತ್ತು. ಈ ಪ್ರಕರಣದಲ್ಲಿ ಆ ಯುವಕರು ಜೈಲು ಪಾಲಾಗಿದ್ದರು. ಜೈಲಿನಿಂದ ಹೊರಗೆ ಬಂದ ನಂತರ ಅವರು ಅಭಿಷೇಕ್‌ಗೆ ಬೆದರಿಕೆ ಹಾಕುತ್ತಿದ್ದರು. ಅಭಿಷೇಕ್ ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋದಾಗ, ಆ ಇಬ್ಬರು ಯುವಕರು ಆತನನ್ನು ಸುತ್ತುವರೆದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಅಭಿಷೇಕ್‌ನ ದೇಹದ ಮೇಲೆ ಚಾಕುವಿನಿಂದ ಇರಿದ ೧೫ ಗಾಯದ ಗುರುತುಗಳು ಪತ್ತೆಯಾಗಿವೆ.

ಸಂಪಾದಕೀಯ ನಿಲುವು

ದೆಹಲಿಯಲ್ಲಿ ನಿರಂತರವಾಗಿ ಹತ್ಯೆಯ ಪ್ರಕರಣಗಳು ನಡೆಯತ್ತಿವೆ. ಇದರಿಂದ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದು ಎದ್ದು ಕಾಣುತ್ತಿದೆ!