ಮುಂಬಯಿ: ಹಿಂದೂ ಯುವತಿಯನ್ನು ವಂಚಿಸಿದ ರಜ್ಜಾಕ್; ಮತಾಂತರಕ್ಕೆ ಒತ್ತಡ!

ರಜ್ಜಾಕ್ ಮತ್ತು ಆತನ ಕುಟುಂಬದವರಿಂದ ಯುವತಿಯ ಮೇಲೆ ಹಲ್ಲೆ

ಮುಂಬಯಿ – ಇಲ್ಲಿನ ಕಾಶಿಮೀರಾ ಪರಿಸರದಲ್ಲಿ ಹಿಂದೂ ಯುವತಿಯೊಬ್ಬಳಿಗೆ ಶಾಬಾಸ್ ರಜ್ಜಾಕ್ ಶೇಖ್ ಎಂಬಾತನು ಮದುವೆಯ ಆಮಿಷ ತೋರಿಸಿ ವಂಚಿಸಿ, ಲೈಂಗಿಕ ಶೋಷಣೆ ಮಾಡಿದ್ದಾನೆ. ಮತಾಂತರಕ್ಕಾಗಿ ಯುವತಿ ಮೇಲೆ ಒತ್ತಡ ಹೇರಿದ್ದಲ್ಲದೆ, ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

1. 2022 ರಲ್ಲಿ ಮಾಲಾಡ್ ನ ಒಂದು ಖಾಸಗಿ ಸಂಸ್ಥೆಯಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಪರಿಚಯವು ಸ್ನೇಹವಾಗಿ ಬದಲಾಯಿತು. (ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮತಾಂಧ ಮುಸ್ಲಿಮರು ಹಿಂದೂ ಯುವತಿಯರಿಗೆ ಈ ರೀತಿ ವಂಚಿಸುತ್ತಿದ್ದರೆ, ಹಿಂದೂ ಸಂಘಟನೆಗಳು ಈ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ! – ಸಂಪಾದಕರು)

2. 2024 ರಲ್ಲಿ ಇವರಿಬ್ಬರೂ ‘ಲಿವ್-ಇನ್ ರಿಲೇಶನ್ಶಿಪ್’ನಲ್ಲಿ (ಮದುವೆಯಾಗದೆ ಜೊತೆಯಾಗಿ ವಾಸಿಸುವುದು) ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಮದುವೆಯ ಸುಳ್ಳು ಭರವಸೆ ನೀಡಿ ಆತ ಯುವತಿಯ ಶಾರೀರಿಕ ಶೋಷಣೆ ಮಾಡಿದನು. ಇದರಿಂದಾಗಿ ಆಕೆ ಎರಡು ಬಾರಿ ಗರ್ಭಿಣಿಯಾದಳು. ಆದರೆ ರಜ್ಜಾಕ್ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದನು.

3. ತನಗೆ ವಂಚನೆಯಾಗುತ್ತಿರುವುದು ಗಮನಕ್ಕೆ ಬಂದಾಗ ಆಕೆ ಮೇ 28 ರಂದು ಆರೋಪಿಯ ಮನೆಗೆ ಪ್ರಶ್ನಿಸಲು ಹೋದಳು. ಆಗ ರಜ್ಜಾಕ್ ಮತ್ತು ಆತನ ಕುಟುಂಬದವರು ಯುವತಿ ಅವಳ ಮೇಲೆ ಹಲ್ಲೆ ಮಾಡಿದರು.

ಸಂಪಾದಕೀಯ ನಿಲುವು

  • ಇಂದಿನವರೆಗೆ ಲವ್ ಜಿಹಾದ್ ನ ಅಸಂಖ್ಯಾತ ಘಟನೆಗಳು ನಡೆದಿದ್ದರೂ ಇನ್ನೂ ಹಿಂದೂ ಯುವತಿಯರ ಕಣ್ಣುಗಳು ಏಕೆ ತೆರೆಯುತ್ತಿಲ್ಲ? ಮತಾಂಧರೊಂದಿಗೆ ಸ್ನೇಹ ಬೆಳೆಸುವ ಬುದ್ಧಿ ಅವರಿಗೆ ಬರುವುದಾದರೂ ಹೇಗೆ?
  • ಲವ್ ಜಿಹಾದ್ ಪ್ರಕರಣಗಳಲ್ಲಿ ಈಗ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರುವುದು ಅಗತ್ಯವಾಗಿದೆ.